Site icon Suddi Belthangady

ಸುಳ್ಯ ಮರಾಟಿ ಸಮಾಜ ಸೇವಾ ಸಂಘದಿಂದ ಹರಿಹರದ ಪ್ರಕಾಶ್ ಕುಕ್ಕುಂದ್ರಡ್ಕರಿಗೆ ನೆರವು

 

ಮರಾಟಿ ಸಮಾಜ ಸೇವಾ ಸಂಘ ಸುಳ್ಯ ತಾಲೂಕು ಇದರ ವತಿಯಿಂದ ಇತ್ತೀಚೆಗೆ ಸಂಭವಿಸಿದ ಜಲ ಪ್ರವಾಹಕ್ಕೆ ಅಂಗಡಿಯನ್ನು ಕಳೆದುಕೊಂಡ ಹರಿಹರ ಪಲ್ಲತಡ್ಕದ ಪ್ರಕಾಶ್ ಕುಕ್ಕುಂದ್ರಡ್ಕ ರವರಿಗೆ ಆರ್ಥಿಕ ನೆರವನ್ನು ಸೆ.9 ರಂದು ಗಿರಿದರ್ಶಿನಿ ಕಚೇರಿಯಲ್ಲಿ ನೀಡಲಾಯಿತು.


ಈ ಸಂದರ್ಭದಲ್ಲಿ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಜನಾರ್ಧನ ಬಿ.ಕುರುಂಜಿಭಾಗ್, ಗೌರವಾಧ್ಯಕ್ಷರಾದ ಸೀತಾನಂದ ಬೇರ್ಪಡ್ಕ, ಮಾಜಿ ಅಧ್ಯಕ್ಷರುಗಳಾದ ಎ.ಕೆ.ನಾಯ್ಕ್ ಚೊಕ್ಕಾಡಿ, ಪ್ರ. ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ್ ಅಜ್ಜಾವರ, ಯುವ ವೇದಿಕೆಯ ಅಧ್ಯಕ್ಷ ಮೋಹನ ಪೆರಾಜೆ, ಮರಾಟಿ ಸಮಾಜದ ಪದಾಧಿಕಾರಿಗಳಾದ ಐತ್ತಪ್ಪ ನಾಯ್ಕ್ ,ಜನಾರ್ಧನ ನಾಯ್ಕ್ ಕೇರ್ಪಳ, ರಘುನಾಥ ಜಟ್ಟಿಪಳ್ಳ,ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಗಿರಿಜಾ ಎಂ.ವಿ.,ಶ್ರೀಮತಿ ಶೋಭಾ ಎ.ಕೆ.ನಾಯ್ಕ್,ಶ್ರೀಮತಿ ರೇವತಿ ದೊಡ್ಡೇರಿ,ಶ್ರೀಮತಿ ನಳಿನಾಕ್ಷಿ ಸೀತಾನಂದ ,ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ಉದಯಕುಮಾರ್ ಎಂ.,ಮೊದಲಾದವರು ಉಪಸ್ಥಿತರಿದ್ದರು.

Exit mobile version