Site icon Suddi Belthangady

ಬಳ್ಳಮಂಜ ಶೇಷ ನಾಗ ಜೋಡುಕರೆ ಕಂಬಳದ ಬೆಳ್ಳಿ ಹಬ್ಬದ ಆಮಂತ್ರಣ ಪತ್ರಿಕೆ ಬಿಡುಗಡೆ

ಮಚ್ಚಿನ : ಇತಿಹಾಸ ಪ್ರಸಿದ್ಧ ಮಹತೋಬಾರ ಬಳ್ಳ ಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ದೇವಳಗದ್ದೆ ಯಲ್ಲಿ ಡಿ.18ರಂದು ಜರಗುವ ಶೇಷ ನಾಗ ಜೋಡುಕರೆ ಕಂಬಳ ಸಮಿತಿಯ ಬೆಳ್ಳಿ ಹಬ್ಬದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ನ.28ರಂದು ದೇವಳದ ವಠಾರ ದಲ್ಲಿ ಜರಗಿತು.

ಆಮಂತ್ರಣ ಪತ್ರಿಕೆಯನ್ನು ಶಾಸಕ ಹರೀಶ್ ಪೂಂಜ ಬಿಡುಗಡೆ ಗೊಳಿಸಿದರು. ಈ ಸಂದರ್ಭದಲ್ಲಿ ಬ್ರಹ್ಮ  ಶ್ರೀ ದೇರೆಬೈಲು ಶಿವಪ್ರಸಾದ್ ತಂತ್ರಿ, ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತಸರ ಡಾ. ಎಂ ಹರ್ಷ ಸಂಪಿಗೆತ್ತಾಯ, ಕಂಬಳ ಸಮಿತಿ ಅಧ್ಯಕ್ಷ ಪದ್ಮನಾಭ ಸುವರ್ಣ, ಗೌರವಾಧ್ಯಕ್ಷರು ಸುದೀರ್ ಶೆಟ್ಟಿ ಕೊರಬೆಟ್ಟು, ಉಪಾಧ್ಯಕ್ಷ ಪ್ರಮೋದ್ ಕುಮಾರ್ ಬಳ್ಳಮಂಜ, ಕಾರ್ಯದರ್ಶಿ ವಸಂತ ಮರಕಡ, ಜೊತೆ ಕಾರ್ಯದರ್ಶಿ ಅವಿನಾಶ್ ಕುಲಾಲ್, ನಾರಾಯಣ ಪೂಜಾರಿ ಹೊಸಮನೆ, ಶಾಮ್ ಪ್ರಸಾದ್ ಸಂಪಿಗೆತ್ತಾಯ, ಎಂ ಅಶೋಕ್ ಕುಮಾರ್ ಸಂಪಿಗೆತ್ತಾಯ, ಕಂಬಳ ಸಮಿತಿ ಸರ್ವ ಸದಸ್ಯರು ಉಪಸ್ಥಿತ ರಿದ್ದರು.

Exit mobile version