Site icon Suddi Belthangady

ಮಚ್ಚಿನ:ಆಟೊ, ಬೈಕ್, ಲಾರಿ ಮಧ್ಯೆ ಭೀಕರ ಅಪಘಾತ: ಕಾಲೇಜು ವಿದ್ಯಾರ್ಥಿ ಸ್ಥಳದಲ್ಲಿಯೇ ಸಾವು

 

ಮಚ್ಚಿನ: ಇಲ್ಲಿಯ ಮಾರಿ ಗುಡಿ ಬಳಿ ಆಟೊ, ಬೈಕ್, ಲಾರಿ ಮದ್ಯೆ ನಡೆದ ಅಪಘಾತ ದಲ್ಲಿ ಬೈಕ್ ಸವಾರ ಕೊಡ್ಲಕ್ಕೆ ಹರೀಶ್ ಪೂಜಾರಿ ಯವರ ಪುತ್ರ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ವಿದ್ಯಾರ್ಥಿ ಹರ್ಷಿತ್ (21) ಮೃತ ಪಟ್ಟ ಘಟನೆ ಇಂದು ನ.25ರಂದು ಸಂಜೆ ನಡೆದಿದೆ.

ಬೈಕ್ ಸವಾರ ಆಟೊ ವನ್ನು ಹಿಂದಕ್ಕುವ  ರಭಸದಲ್ಲಿ ಬೈಕ್ ಆಟೋಗೆ ತಾಗಿ ಮಗುಚಿ ಬಿದ್ದು ಎದುರಿನಿಂದ ಬಂದ ಲಾರಿ ಹರಿದು ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯ ಬೇಕಾಗಿದೆ.

Exit mobile version