Site icon Suddi Belthangady

ಅಳದಂಗಡಿಯಲ್ಲಿ ನವಮೈತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಶಿರ್ತಾಡಿ ಇದರ 3ನೇ ಶಾಖೆ ಉದ್ಘಾಟನೆ

ಅಳದಂಗಡಿ: ಇಲ್ಲಿಯ ಜ್ಯೋತಿ ಕಾಂಪ್ಲೆಕ್ಸ್‌ನಲ್ಲಿ ನವಮೈತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಶಿರ್ತಾಡಿ ಇದರ ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ 2ನೇ ಶಾಖೆ ಕಾರ್ಯಾಚರಿಸುತ್ತಿದ್ದು ಇದೀಗ ಅಳದಂಗಡಿಯಲ್ಲಿ 3ನೇ ಶಾಖೆಯ ಉದ್ಘಾಟನಾ ಸಮಾರಂಭ ನ.25 ರಂದು  ನಡೆಯಿತು.

ಶಾಖೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು ಉದ್ಘಾಟಿಸಿದರು.  ಅಳದಂಗಡಿ ಗ್ರಾ.ಪಂ. ಅಧ್ಯಕ್ಷೆ  ಸೌಮ್ಯ ಹರಿಪ್ರಸಾದ್, ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ಬೆಂಗಳೂರು ಇದರ ಹಿರಿಯ ವ್ಯವಸ್ಥಾಪಕ ಗುರುಪ್ರಸಾದ್, ಮಾತೃ ಭೂಮಿ ಸಹಕಾರಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೃಷ್ಣಕುಮಾರ್,  ಜ್ಯೋತಿ ಕಾಂಪ್ಲೆಕ್ಸ್ ಮಾಲಕ ಬಾಲಕೃಷ್ಣ ಶೆಟ್ಟಿ, ಸಂಘದ ಅಧ್ಯಕ್ಷ ಸತೀಶ್ ವಿ ಶೆಟ್ಟಿ, ಉಪಾಧ್ಯಕ್ಷ ವಿನಯ್ ಹೆಗ್ಡೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂದೀಪ್ ಜೆ.ಕೆ,  ನಿರ್ದೇಶಕರುಗಳಾದ ಮಹಾವೀರ ಜೈನ್, ಎಸ್ ಪ್ರವೀಣ್ ಕುಮಾರ್, ಮಹಾವೀರ ಮುದ್ಯ, ಫ್ರಾಂಕಿ ಎಲ್ ಪಿಂಟೊ, ಸದಾನಂದ ಪೂಜಾರಿ, ರಕ್ಷಿತ್ ಆರ್, ಲ್ಯಾನ್ಸಿ ಡೇಸಾ, ಅರುಣ್ ಶೆಟ್ಟಿ, ಸದಾನಂದ ಪೂಜಾರಿ, ಶ್ರೀಮತಿ ಬಬಿತಾ ಆರ್ ಶೆಟ್ಟಿ, ಶ್ರೀಮತಿ ಶಾರದ ಸುವರ್ಣ, ಅಳದಂಗಡಿ ಶಾಖಾ ವ್ಯವಸ್ಥಾಪಕ ಪ್ರಜ್ವಲ್ ಜೈನ್ ಭಾಗಿಯಾಗಿದ್ದರು

Exit mobile version