Site icon Suddi Belthangady

ಅನಂತೋಡಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಆಮಂತ್ರಣ ಬಿಡುಗಡೆ


ಬೆಳಾಲು :ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಡಿ.24 ಮತ್ತು 25 ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯ ಬಿಡುಗಡೆ ನ.20 ರಂದು ದೇವಸ್ಥಾನದಲ್ಲಿ ನಡೆಯಿತು.

ದೇವಸ್ಥಾನದ ಆಡಳಿತ ಮೊಕ್ತೇಸರ ಜೀವಂಧರ ಕುಮಾರ್ ಜೈನ್ ಬೆಳಾಲು ಗುತ್ತು, ಆಶ್ರಣ್ಣ ಗಿರೀಶ್ ಬಾರಿತ್ತಾಯ ಪಾರಳ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನೋಟರಿ ವಕೀಲ ಶ್ರೀನಿವಾಸ ಗೌಡ, ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್ ಕೇರ್ಮುಣ್ಣಾಯ, ಉಪಾಧ್ಯಕ್ಷೆ ಮಮತ ದಿನೇಶ್ ಪೂಜಾರಿ ಉಪ್ಪಾರು, ಜಾತ್ರಾ ಸಮಿತಿ ಅಧ್ಯಕ್ಷ ದೇಜಪ್ಪ ಗೌಡ ಎಳ್ಳುಗದ್ದೆ, ಸಮಿತಿಯ ಸದಸ್ಯರುಗಳಾದ ದೇಜಪ್ಪ ಗೌಡ ಅರಣೆಮಾರು, ಲಿಂಗಪ್ಪ ಪೂಜಾರಿ ಬನಂದೂರು, ಭಜನಾ ಮಂಡಳಿ ಗೌರವ ಅಧ್ಯಕ್ಷ ಜಾರಪ್ಪ ಗೌಡ ಅರಣೆಮಾರು,ದೇವಸ್ಥಾನದ ವಿವಿಧ ಸಮಿತಿಗಳ ಸದಸ್ಯರು,ಬೈಲುವಾರು ಸಮಿತಿಯ ಸಂಚಾಲಕರು, ಊರವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜಾತ್ರೋತ್ಸವ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ದೇಜಪ್ಪ ಗೌಡ ಮತ್ತು ವ್ಯವಸ್ಥಾಪನ ಸಮಿತಿ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಮಮತಾ ದಿನೇಶ್ ಪೂಜಾರಿ ಇವರನ್ನು ಅಭಿನಂದಿಸಲಾಯಿತು.ಡೀಕಯ್ಯ ಗೌಡ ಅರಣೆಮಾರು ಸ್ವಾಗತಿಸಿ, ಹೇಮಾ ಮೋಹನ್ ವಚ್ಚ ವಂದಿಸಿದರು, ದೇವಸ್ಥಾನದ ಮೆನೇಜರ್ ಶಿವಪ್ರಸಾದ್ ಕೆ. ನಿರೂಪಿಸಿದರು.

Exit mobile version