ಬೆಳಾಲಿನಲ್ಲಿ ಸುದ್ದಿ ಕೃಷಿ ಮಾಹಿತಿ ಕಾರ್ಯಾಗಾರ

0

ಬೆಳಾಲು :ಸುದ್ದಿ ಕೃಷಿ ಮಾಹಿತಿ ಕೇಂದ್ರದ ವತಿಯಿಂದ ಸುದ್ದಿ ಕೃಷಿ ಮಾಹಿತಿ ಕಾರ್ಯಾಗಾರ ಕೃಷಿ ಖುಷಿ ನ.19 ರಂದು ಬೆಳಾಲು ಪ್ರಾ. ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು.

ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರು ಸಂಪಾದಕ ಡಾ. ಯು. ಪಿ. ಶಿವಾನಂದ, ಸುದ್ದಿ ಕೃಷಿ ಮಾಹಿತಿಯ ಮುಖ್ಯಸ್ಥ ಗಣೇಶ್ ಕಲ್ಲರ್ಪೆ, ಸುದ್ದಿ ಪತ್ರಿಕೆ ಬೆಳ್ತಂಗಡಿ ಸಿಇಒ ಸಿಂಚನ ಊರು ಬೈಲು, ಬೆಳಾಲು ಶ್ರೀ ಧ. ಮ. ಪ್ರೌಢ ಶಾಲಾ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್, ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳಾದ ದಾಮೋದರ ಗೌಡ, ಸುಲೈಮಾನ್ ಭೀಮ0ಡೆ ,ಗ್ರಾಮಭಿ ವೃದ್ಧಿ ಯೋಜನೆಯ ಸುಳ್ಯ ಕೃಷಿ ಅಧಿಕಾರಿ ರಮೇಶ್ ಗೌಡ ಮರಕ್ಕಡ, ತಾಲೂಕು ಪಂಚಾಯತ್ ಸಾಯೋಜಕ ಜಯಾನಂದ ಲಾಯಿಲ,ಪ್ರಗತಿ ಪರ ಕೃಷಿಕರಾದ ರವೀಂದ್ರ ಗೌಡ ಸೌತೆಗದ್ದೆ, ಶೇಖರ ಪೂಜಾರಿ ಎಂಜಿರಿಗೆ, ನಾರಾಯಣ ಶೆಟ್ಟಿಗಾರ ಮುರ್ಲೆಗುಂಡಿ,ಪ್ರಗತಿ ಬಂಧು ಒಕ್ಕೂಟ ಕೊಲ್ಪಾಡಿ ಅಧ್ಯಕ್ಷ ಎಲ್ಯಣ್ಣ ನಾಯ್ಕ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಮಧುರ ಆರ್., ಹರಿಣಾಕ್ಷಿ, ಮಾಯ ಮಹೇಶ್ವರ ಭಜನಾ ಮಂಡಳಿ ಕಾರ್ಯದರ್ಶಿ ಹರೀಶ್ ಆಚಾರ್ಯ, ಮೋಹನ ಪೂಜಾರಿ ಪೆಲತ್ತಡಿ, ರಘು ಶೆಟ್ಟಿಗಾರ, ಸುರೇಶ ಶೆಟ್ಟಿಗಾರ  ಇನ್ನಿತರ ಸಂಘ ಸಂಸ್ಥೆ ಗಳ ಸದಸ್ಯರು,ಊರವರು ಉಪಸ್ಥಿತರಿದ್ದು ತಮ್ಮ ಅನುಭವ ಹಂಚಿ ಕೊಂಡರು. ಜಾರಪ್ಪ ಪೂಜಾರಿ ಬೆಳಾಲು ಸ್ವಾಗತಿಸಿದರು, ಕೆ. ಎನ್. ಗೌಡ, ಅಭಿಷೇಕ್, ದೀಪ್ತಿ, ಕುಶಲಪ್ಪ ಗೌಡ ಪುತ್ತೂರು, ಡ್ರೈವರ್ ದುರ್ಗಾ ಪ್ರಸಾದ್, ಸಹಕಾರ ಸಂಘದ ನೌಕರರು ಸಹಕರಿಸಿದರು.

 

LEAVE A REPLY

Please enter your comment!
Please enter your name here