ಓಡಿಲ್ನಾಳ : ಇಲ್ಲಿಯ ಅಮರ್ ಜಾಲು ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ಸಂಕ್ರಮಣ ಪ್ರಯುಕ್ತ ಅಗೇಲು ಸೇವೆ ನ.16 ರಂದು ಜರುಗಿಯಿತು.
ವೃಶ್ಚಿಕ ಸಂಕ್ರಮಣದ ಸಂದರ್ಭದಲ್ಲಿ ಸ್ವಾಮಿ ಕೊರಗಜ್ಜ ದೈವಕ್ಕೆ ವಿಶೇಷ ಅಲಂಕಾರ ಪೂಜೆ, ಭಕ್ತಾದಿಗಳಿಂದ ಹರಕೆ ಅಗೇಲು ಸೇವೆ ಮತ್ತು ದೈವ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೈವದ ಅಗೇಲು ಪ್ರಸಾದ ಪಡೆದರು.
ಅಮರ್ ಜಾಲು ದೈವಸ್ಥಾನದ ವ್ಯವಸ್ಥಾಪಕ ರವಿ ಪೂಜಾರಿ ಮತ್ತು ಮನೆಯರ ಉಪಸ್ಥಿತರಿದ್ದರು. ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.