ಬೆಳಾಲು : ಕೊಲ್ಪಡಿಯಲ್ಲಿ ಮಕ್ಕಳ ಹುಣ್ಣಿಮೆ ಪ್ರಯುಕ್ತ ಆಟೋಟ ಸ್ಪರ್ಧೆ

0


ಬೆಳಾಲು : ಶ್ರೀ  ಸುಬ್ರಹ್ಮಣ್ಯೇಶ್ವರ   ಭಜನಾ ಮಂಡಳಿ ಕೊಲ್ಪಾಡಿ ಹಾಗೂ ಶ್ರೀ ಸುಬ್ರಹ್ಮಣ್ಯಶ್ವರ ಗೆಳೆಯರ ಬಳಗ ಕೊಲ್ಪಾಡಿ ಇದರ ಆಶ್ರಯದಲ್ಲಿ ಮಕ್ಕಳ ಹುಣ್ಣಿಮೆಯ ಪ್ರಯುಕ್ತ 40 ನೇ ವರ್ಷದ ಆಟೋಟ ಸ್ಪರ್ಧೆಗಳು ನ.13 ರಂದು ಕೊಲ್ಪಾಡಿ ಶ್ರೀ ಸುಬ್ರಹ್ಮಣ್ಯಶ್ವರ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.

ಕ್ರೀಡಾ ಕೂಟವನ್ನು ಕೊಲ್ಪಾಡಿ ಸ. ಕಿ. ಪ್ರಾ. ಶಾಲಾ ಸಹ ಶಿಕ್ಷಕ ಪರಮೇಶ್ವರ ಎಸ್. ಉದ್ಘಾಟಿಸಿ ಶುಭ ಹಾರೈಸಿದರು.

ಭಜನಾ ಮಂಡಳಿ ಅಧ್ಯಕ್ಷ ಸದಾಶಿವ ಗೌಡ ಅಧ್ಯಕ್ಷತೆ ವಹಿಸಿದ್ದರು. ಗೆಳೆಯರ ಬಳಗದ ಗೌರವ ಅಧ್ಯಕ್ಷ ಆನಂದ ಗೌಡ, ತೀರ್ಪುಗಾರ ಧರ್ಮೇ0ದ್ರ ಕುಮಾರ್,ಶಿಲ್ಪಿ ಶಶಿಧರ ಆಚಾರ್ಯ, ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.

ಸಮಿತಿ ಸದಸ್ಯ ರಮೇಶ್ ಗೌಡ ಮರಕ್ಕಡ ಸ್ವಾಗತಿಸಿ,  ಗೆಳೆಯರ ಬಳಗ ಅಧ್ಯಕ್ಷ ರಾಜೇಶ್ ಕುರ್ಕಿಲ್ ವಂದಿಸಿದರು. ಕಾರ್ಯದರ್ಶಿ ಮಾಧವ ಗೌಡ ಓನಾಜೆ ನಿರೂಪಿಸಿದರು.

ಬಳಿಕ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಸುಬ್ರಹ್ಮಣ್ಯಶ್ವರ ಗೆಳೆಯರ ಬಳಗ ಅಧ್ಯಕ್ಷ ರಾಜೇಶ್ ಗೌಡ ಕುರ್ಕಿಲು ವಹಿಸಿದ್ದರು.

ಮಾಯ ಉ. ಹಿ. ಪ್ರಾ. ಶಾಲಾ ಮುಖ್ಯ ಶಿಕ್ಷಕ ವಿಠ್ಠಲ ಎಂ., ಬೆಳಾಲು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸತೀಶ್ ಎಳ್ಳುಗದ್ದೆ, ಸದಸ್ಯರುಗಳಾದ ಸುರೇಂದ್ರ ಗೌಡ ಎಸ್.,ಕೃಷ್ಣಯ್ಯ ಆಚಾರ್ಯ, ಜಯಂತ ಗೌಡ, ತೀರ್ಪುಗಾರರದ ಧರ್ಮೇ0ದ್ರ ಕುಮಾರ್, ಮೋಹನ್ ಗೌಡ ಮಾಚರ್, ಶಶಿಧರ ಓಡಿಪ್ರೋಟ್ಟು, ಇನ್ನಿತರ ಗಣ್ಯರು ಉಪಸ್ಥಿತರಿದ್ದು ವಿಜೇತರಿಗೆ ಬಹುಮಾನ ವಿತರಿಸಿದರು.

ರಮೇಶ್ ಗೌಡ ಮರಕ್ಕಡ ನಿರೂಪಿಸಿದರು ಸದಾಶಿವ ಗೌಡ ಮೈರಾಜೆ ಸ್ವಾಗತಿಸಿ, ಮಾಧವ ಗೌಡ ಓನಾಜೆ ವಂದಿಸಿದರು, ಸಮಿತಿಯ ಪದಾಧಿಕಾರಿಗಳು, ಸದಸ್ಯರು ಊರವರು ಹಾಜರಿದ್ದು ಸಹಕರಿಸಿದರು.

LEAVE A REPLY

Please enter your comment!
Please enter your name here