Site icon Suddi Belthangady

ಬಳ್ಳಮಂಜ ಶೇಷ-ನಾಗ ಜೋಡುಕರೆ ಕಂಬಳ ಸಮಾಲೋಚನಾ ಸಭೆ

ಬಳ್ಳಮಂಜ : ಇತಿಹಾಸ ಪ್ರಸಿದ್ಧ ಬಳ್ಳ ಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ದೇವಳ ಗದ್ದೆಯಲ್ಲಿ ಜರಗುವ 25ನೇ ವರ್ಷದ ಶೇಷ ನಾಗ ಜೋಡುಕರೆ ಕಂಬಳದ ಸಮಾಲೋಚನಾ ಸಭೆಯು ದೇವಸ್ಥಾನದ ವಠಾರದಲ್ಲಿ ನ.13ರಂದು ನಡೆಯಿತು.

ಕಂಬಳ ಸಮಿತಿ ಅಧ್ಯಕ್ಷ ಪದ್ಮನಾಭ ಸುವರ್ಣಅಧ್ಯಕ್ಷತೆಯಲ್ಲೀ ಜರಗಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಡಾ. ಹರ್ಷ ಸಂಪಿಗೆತ್ತಾಯ, ಕಂಬಳ ಸಮಿತಿ ಉಪಾಧ್ಯಕ್ಷ ಪ್ರಮೋದ್ ಕುಮಾರ್, ಕಾರ್ಯದರ್ಶಿ ವಸಂತ ಮರಕಡ ವೇದಿಕೆ ಯಲ್ಲಿ ಉಪಸ್ಥಿತರಿದ್ದರು. ಕಂಬಳ ಸಮಿತಿ ಪದಾಧಿಕಾರಿಗಳು, ಸದಸ್ಯರು, ಊರ ಗಣ್ಯರು ಭಾಗವಹಿಸಿ ಆಚರಣೆ ಬಗ್ಗೆ ಯೋಜನೆ ರೂಪಿಸಲಾಯಿತು

Exit mobile version