ಮೇಲಂತಬೆಟ್ಟು : ಮೇಲಂತೆಟ್ಟು ಸಿಎಸ್ ಸಿ ಸೇವಾಕೇಂದ್ರದ ಉದ್ಘಾಟನೆ ಕಾರ್ಯಕ್ರಮ ನ. 10ರಂದು ನಡೆಸಲಾಯಿತು.
ಹಿರಿಯ ವಕೀಲರಾದ ಭಗೀರಥ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟನೆಯನ್ನು ಮಾಡಿ ಶುಭಕೋರಿದರು.
ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿ ಸುರೇಂದ್ರ , ಸಿಎಸ್ ಸಿ ಸೇವಾಕೇಂದ್ರ ದ ಮೂಲಕ ಸರಕಾರದ ಹಲವಾರು ಯೋಜನೆ, ಕಡಿಮೆ ವೆಚ್ಚದಲ್ಲಿ ಇನ್ನಿತರ ಸೇವೆಗಳನ್ನು ನೀಡುವ ಉದ್ದೇಶದಲ್ಲಿ ರಾಜ್ಯದ ಪ್ರತಿ ಗ್ರಾಮದಲ್ಲಿ ಸೇವಾಕೇಂದ್ರ ತೆರೆಯಲಾಗುತ್ತಿದೆ. ಎಲ್ಲರೂ ಸದುಪಯೋಗ ಪಡಿಸಿಕೊಳ್ಳಲು ಮಾಹಿತಿ ನೀಡಿದರು.
ಕೇಂದ್ರ ಒಕ್ಕೂಟದ ಅಧ್ಯಕ್ಷರು ಸೀತಾರಾಮ್ ಭಾಗವಯಿಸಿ ಶುಭ ಕೋರಿದರು,ಒಕ್ಕೂಟದ ಅಧ್ಯಕ್ಷರು ನಾರಾಯಣ್ ಪೂಜಾರಿ, ಗ್ರಾಮ ಸಮಿತಿ ಅಧ್ಯಕ್ಷರು ಯೋಗೀಶ್,ಒಕ್ಕೂಟದ ಪದಾಧಿಕಾರಿಗಳು, ವಲಯದ ಮೇಲ್ವಿಚಾರಕರು ಹರೀಶ್ ಗೌಡ ಸೇವಾಪ್ರತಿನಿಧಿ ಗುಣವತಿ , ಪ್ರಗತಿ ಬಂಧು ಸದಸ್ಯರು ಭಾಗವಯಿಸಿದರು. ಬೆಳ್ತಂಗಡಿ ವಲಯದ ಮೇಲ್ವಿಚಾರಕರು ಸ್ವಾಗತಿಸಿ, ಸೇವಾಪ್ರತಿನಿಧಿ ಸೌಮ್ಯ ಧನ್ಯವಾದವಿತ್ತರು.