Site icon Suddi Belthangady

ಅಂತರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ಶಿಪ್ ನಲ್ಲಿ ಗುರುದೇವ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಬೆಳ್ತಂಗಡಿ: ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ಶಿಪ್ -2022 ಪಂದ್ಯಾವಳಿಯಲ್ಲಿ ಬೆಳ್ತಂಗಡಿಯ ಶ್ರೀ ಗುರುದೇವ ಕಾಲೇಜಿನ 3 ಮಂದಿ ವಿದ್ಯಾರ್ಥಿಗಳು ಉನ್ನತ ಸಾಧನೆ ಮೆರೆದಿದ್ದು ಲಂಡನ್ ನಲ್ಲಿ ನಡೆಯುವ ಮುಂದಿನ ಹಂತದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳಾದ ಯುವರಾಜ್ ಕಟಾ ಹಾಗೂ ಕುಮಿಟೆ ಯಲ್ಲಿ ಚಿನ್ನದ ಪದಕ, ಶಹೀರ್ ಅನಸ್ ಕಟಾ ವಿಭಾಗದಲ್ಲಿ ಚಿನ್ನ ಹಾಗೂ ಕುಮಿಟೆ ವಿಭಾಗದಲ್ಲಿ ಬೆಳ್ಳಿ, ಶೇಖ್ ಕಲ್‌ಫಾನ್‌ ಹುಸೇನ್‌ ಕಟಾ ವಿಭಾಗದಲ್ಲಿ ಚಿನ್ನ‌ ಹಾಗೂ ಕುಮಿಟೆ ವಿಭಾಗದಲ್ಲಿ ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ವಿಜೇತ ವಿದ್ಯಾರ್ಥಿಗಳನ್ನು ಶ್ರೀ ಗುರುದೇವ ಕಾಲೇಜಿನ ಕಾಲೇಜಿನ ಸಂಚಾಲಕ ಹಾಗೂ ಮಾಜಿ ಶಾಸಕ ಕೆ. ವಸಂತ ಬಂಗೇರ ಹಾಗೂ ಪ್ರಾಂಶುಪಾಲರು ಅಭಿನಂದಿಸಿದ್ದಾರೆ.

ಸದ್ರಿ ವಿದ್ಯಾರ್ಥಿಗಳಿಗೆ ರೆನ್ಸಿ ಮುಹಮ್ಮದ್ ನದೀಮ್ ಹಾಗೂ ಶಿಹಾನ್ ಅಬ್ದುಲ್ ರಹ್ಮಾನ್‌ ಉಜಿರೆ ಅವರು ಕರಾಟೆ ತರಬೇತಿ‌ ನೀಡಿದ್ದಾರೆ.

Exit mobile version