Site icon Suddi Belthangady

ಚಾರ್ಮಾಡಿ ನಿವಾಸಿ ಯಶೋಧರ ವಿಷ ಸೇವಿಸಿ ಆತ್ಮಹತ್ಯೆ

ಉಜಿರೆ: ಚಾರ್ಮಾಡಿಯಲ್ಲಿ ಸಾಲಬಾಧೆಯಿಂದ ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.

ಮೃತ ವ್ಯಕ್ತಿ ಚಾರ್ಮಾಡಿ ನಿವಾಸಿ ಯಶೋಧರ ಎಂಬಾತನಾಗಿದ್ದಾನೆ. ಈತನು ಸ್ವ ಸಹಾಯ ಸಂಘದಲ್ಲಿ ಹಾಗೂ ಬ್ಯಾಂಕಿನಲ್ಲಿ ಸಾಲ ಮಾಡಿಕೊಂಡಿದ್ದ ಹಾಗೂ ಅಮಲು ಪದಾರ್ಥ ಸೇವಿಸುವ ಚಟ ಹೊಂದಿದ್ದ . ಅ 31ರಂದು ಮನೆಯ ಅಂಗಳದಲ್ಲಿ ಈತ ವಿಷ ಸೇವಿಸಿ ದ್ದು ಆತನ ಪತ್ನಿ ಹಾಗೂ ಸ್ಥಳೀಯರು ಸೇರಿ ಆತನ ನ್ನು ಆಸ್ಪತ್ರೆಗೆ ದಾಖಲಿಸಿ ದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ನ.4ರಂದು ಮೃತಪಟ್ಟಿದ್ದಾರೆ.

ಘಟನೆಯ ಬಗ್ಗೆ ಪತ್ನಿ ‌ಹೇಳಿಕೆಯಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Exit mobile version