ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಹೆಮ್ಮೆಯ ನೃತ್ಯ ನಿರ್ದೇಶಕರು, ನೃತ್ಯ ನಿಕೇತನ, ಸಂಜಯ ನಗರ, ಬೆಳ್ತಂಗಡಿ ಇದರ ನಿರ್ದೇಶಕರು, ಹಿರಿಯವರಾದ ಶ್ರೀ ಪಿ ಕಮಲಾಕ್ಷ ಆಚಾರ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು ಇಂದು ಬೆಂಗಳೂರಿಗೆ ತೆರಳುವ ಸಂದರ್ಭದಲ್ಲಿ ಶಾಸಕರಾದ ಹರೀಶ್ ಪೂಂಜ ರವರ ಕಚೇರಿ ‘ಶ್ರಮಿಕ’ ಕ್ಕೆ ಭೇಟಿ ನೀಡಿದರು .
ಈ ಸಂದರ್ಭದಲ್ಲಿ ನಾವೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಣೇಶ್ ಗೌಡ ರವರು ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಲಾಯಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗಣೇಶ್, ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಧನಲಕ್ಷ್ಮೀ ಗಟ್ಟಿ,ಶಾಸಕರ ಆಪ್ತ ಕಾರ್ಯದರ್ಶಿ ಮಂಜುನಾಥ್, ಯುವ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್,ಭಾಜಪ ಮಂಡಲ ಸೋಷಿಯಲ್ ಮೀಡಿಯಾ ಸಂಚಾಲಕರಾದ ಸುಪ್ರೀತ್ ಜೈನ್,ಭಾಜಪ ಯುವ ಮೋರ್ಚಾ ತಾಲೂಕು ಸದಸ್ಯರಾದ ಮಂಜುನಾಥ್ ವಿ ಉಪಸ್ಥಿತರಿದ್ದರು.