ಬೆಳಾಲು : ಶ್ರೀ ಮಾಯ ಮಹೇಶ್ವರ ಭಜನಾ ಮಂಡಳಿ ಮಾಯ ಬೆಳಾಲು ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ 40 ನೇ ವರ್ಷದ ಆಟೋಟ ಸ್ಪರ್ಧೆಗಳು ಅ.27 ರಂದು ಬೆಳಾಲು ಶ್ರೀ ಮಾಯ ಮಹಾದೇವ ದೇವಸ್ಥಾನದ ವಠಾರದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳೊಂದಿಗೆ ಜರಗಿತು.ಶ್ರೀ ಮಾಯಾ ಮಹಾದೇವ ದೇವಸ್ಥಾನದ ಅರ್ಚಕ ಕೇಶವ ರಾಮಾಯಜಿ ದೀಪ ಬೆಳಗಿಸಿ ಉದ್ಘಾಟಟಿಸಿದರು.
ಮುಖ್ಯ ಅತಿಥಿಗಳಾಗಿ ಸುದ್ದಿ ಬಿಡುಗಡೆ ಪತ್ರಿಕೆಯ ಸಹಾಯಕ ವ್ಯವಸ್ಥಾಪಕ ಜಾರಪ್ಪ ಪೂಜಾರಿ ಬೆಳಾಲು,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವ್ರಿದ್ಧಿ ಯೋಜನೆಯ ಮಾಯ ಒಕ್ಕೂಟದ ಅಧ್ಯಕ್ಷ ಗಂಗಾಧರ ಸಾಲ್ಯಾನ್,ಮಾಯ ಫ್ರೆಂಡ್ಸ್ ಮಾಯ ಅಧ್ಯಕ್ಷ ರಾಧಾಕೃಷ್ಣ ಮಾಯ, ಮಾಯ ವಲಯದ ಸೇವಾ ಪ್ರತಿನಿಧಿ ಶ್ರೀಮತಿ ಪ್ರಭಾವತಿ, ಮಾಯ ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಶೀಲಾವತಿ ಜಿ., ಬೆಳಾಲು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ವೆಂಕಟೇಶ್ ಬೆಳಾಲು, ಭಾಗವಹಿಸಿದ್ದರು.
ಭಜನಾ ಮಂಡಳಿಯ ಅಧ್ಯಕ್ಷ ಕೃಷ್ಣಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು.ತೀರ್ಪುಗಾರರಾದ ಧರ್ಮೇ0ದ್ರ ಕುಮಾರ್, ಮೋಹನ ಗೌಡ ಮಾಚಾರ್, ರವಿಚಂದ್ರ ಜೈನ್, ಶಶಿಧರ ಓಡಿಪ್ರೋಟ್ಟು, ರಮೇಶ್ ಗೌಡ ಮೆರಕ್ಕಡ,, ಶೇಖರ ಗೌಡ ಕೊಲ್ಲಿಮಾರು, ಕಾರ್ಯದರ್ಶಿ ಹರೀಶ್ ಆಚಾರ್ಯ,ಮಾಜಿ ಕಾರ್ಯದರ್ಶಿ ಶಿವಕೀರ್ತಿ, ಕ್ರೀಡಾ ಸಮಿತಿಯ ಸಲಹೆಗಾರ ಯತಿರಾಜ್, ಭಜನಾ ಮಂಡಳಿಯ ಪದಾಧಿಕಾರಿಗಳು, ಸದಸ್ಯರು,ಕ್ರೀಡಾ ಸಮಿತಿಯ ಸದಸ್ಯರು ಊರವರು, ಕ್ರೀಡಾ ಸ್ಪರ್ಧಿಗಳು ಉಪಸ್ಥಿತರಿದ್ದರು.
ಅನಂತರ ವಿವಿಧ ವಿಭಾಗದಲ್ಲಿ ಕಬ್ಬಡಿ, ಹಗ್ಗ ಜಗ್ಗಾಟ, ಗುಡ್ಡೆಗಾಡು ಓಟ, ತ್ರೋಬಾಲ್, ಎನ್ನಿತರ ಸ್ಪರ್ಧೆಗಳು ಜರಗಿತು.
ಭಜನಾ ಮಂಡಳಿಯ ಗೌರವಾಧ್ಯಕ್ಷ ವಸಂತ ಬಿ. ಬಜಕ್ಕಳ ಸ್ವಾಗತಿಸಿದರು, ಜೊತೆ ಕಾರ್ಯದರ್ಶಿ ಶಿವಪ್ರಸಾದ್ ನಿರೂಪಿಸಿ ಕ್ರೀಡಾ ಸಮಿತಿ ಸದಸ್ಯ ಗುರುಕಿರಣ್ ವಂದಿಸಿದರು.