Site icon Suddi Belthangady

ಕನ್ಯಾಡಿ: ಮಧ್ಯ ವ್ಯಸನಿ ಕೆರೆಗೆ ಬಿದ್ದು ಸಾವು

ಉಜಿರೆ: ಧರ್ಮಸ್ಥಳ ಗ್ರಾಮದ ಕನ್ಯಾಡಿಯಲ್ಲಿ ಮಧ್ಯ ವ್ಯಸನಿಯೊಬ್ಬ ಆಯತಪ್ಪಿ ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಆತ ಕನ್ಯಾಡಿ ನಿವಾಸಿ ಸುಂದರ( 40ವ) ಎಂದು ಗುರುತಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ಮನೆಯಿಂದ ನಾಪತ್ತೆಯಾಗಿದ್ದು, ಭಾನುವಾರ ಕನ್ಯಾಡಿಯಲ್ಲಿ ಮತ್ತಿಲ ಎಂಬಲ್ಲಿ ತೋಟದಲ್ಲಿರುವ ಕೆರೆಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ.

ಮಧ್ಯಪಾನ ಮಾಡಿ ಆಯತಪ್ಪಿ ಆತ ಕೆರೆಗೆ ಬಿದ್ದು ಸಾವನ್ನಪ್ಪಿರಬಹುದುದೆಂದು ಶಂಕಿಸಲಾಗಿದೆ.

ಆತನ ತಾಯಿ ಸೀತು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version