ಮಂಗಳೂರು: ಕುಟುಂಬ ಸಮೇತರಾಗಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ ವೀರೇಂದ್ರ ಹೆಗ್ಗಡೆಯವರು ಕಾಂತಾರ ಚಿತ್ರ ವೀಕ್ಷಿಸಲು ಮಂಗಳೂರಿನ ಭಾರತ್ ಮಾಲ್ ಗೆ ಅ.21ರಂದು ತೆರಳಿದ್ದು ಚಿತ್ರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಪತ್ನಿ ಡಾ| ಹೇಮಾವತಿ ಹೆಗ್ಗಡೆ, ಮೊಮ್ಮಗಳು ಮಾನ್ಯ ಸಹಿತ ಸಂಬಂಧಿಕರ ಜೊತೆ ಚಿತ್ರ ವೀಕ್ಷಣೆ ಮಾಡಿದ್ದು ಇವರಿಗೆ ಕಾಂತಾರ ಚಿತ್ರ ತಂಡ ಸಾಥ್ ನೀಡಿದೆ.