Site icon Suddi Belthangady

ಗ್ರಾಮ ದೇವತೆಗೆ ಹುಲಿ ವೇಷದ ಕಾಣಿಕೆ ಸಲ್ಲಿಸಿದ ಲಾಯಿಲ ನಿವಾಸಿ ಹೇಮಂತ್

ಲಾಯಿಲ:  ತಮ್ಮ ಗ್ರಾಮ ದೇವತೆಗಾಗಿ ಮೂರು ವರ್ಷಗಳ ಕಾಲ ಪ್ರತಿಫಲಾಪೇಕ್ಷೆ ಇಲ್ಲದೇ ಹುಲಿ ವೇಷ ಹಾಕಿಸುವ ನಿರ್ಧಾರಕೈಗೊಂಡಿದ್ದ ಲಾಯಿಲದ ಚಂದ್ಕೂರು  ಗ್ರಾಮದ ಯುವಕ ಹೇಮಂತ್ ನವರಾತ್ರಿಯಂದು  ಗಡಾಯಿಕಲ್ ತಪ್ಪಲಿನಲ್ಲಿರುವ ಚಂದದೂರು  ಚಂದ್ಕೂರಿನ ದುರ್ಗಾ ಮಾತೆಗೆ  ಸಾಂಪ್ರದಾಯಿಕ ಹುಲಿವೇಷ ಧರಿಸಿ ಕುಣಿತದ ಸೇವೆ ನೀಡಿದ್ದಾರೆ.

ಉದ್ಯೋಗ ನಿಮಿತ್ತ ವಿದೇಶದಲ್ಲಿದ್ದರೂ ಅವರಿಗೆ ಊರಿನ ಬಗ್ಗೆ ತುಡಿತವಿತ್ತು.  ಮೊದಲ ಮೂರು ವರ್ಷ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ದೇವಿಯ ಸೇವೆ. ಯಾರ ಮನೆಗೂ, ಅಂಗಡಿಗೂ ಹೋಗಿ ಹುಲಿ ಕುಣಿತ ಮಾಡಿ ಹಣ ಸಂಗ್ರಹ ಮಾಡಲು ಇಲ್ಲ ಎಂಬ ನಿರ್ಧಾರ ಮಾಡಿಕೊಂಡಂತೆ ಶ್ರೀ ದುರ್ಗಾಪರಮೇಶ್ವರೀ ದೇವಿಗೆ ಸಾಂಪ್ರದಾಯಿಕ ಹುಲಿವೇಷ ಧರಿಸಿ ಕುಣಿತದ ಸೇವೆ ನೀಡಿದ್ದಾರೆ. ಈ ಸೇವೆ ಊರಿನ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

.

Exit mobile version