Site icon Suddi Belthangady

ಧರ್ಮಸ್ಥಳ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ


ಧರ್ಮಸ್ಥಳ: ಧರ್ಮಸ್ಥಳ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಕ್ಷೀರಧಾರೆ ಇದರ ಉದ್ಘಾಟನೆ ಅ.15 ರಂದು ಧರ್ಮಸ್ಥಳ ಕೃಷಿ ಪತ್ತಿನ ಸಹಕಾರ ಸಂಘದ ಬಳಿ ನಡೆಯಿತು.

ಉಜಿರೆ ಶ್ರೀ ಮಂಜುನೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಉದ್ಘಾಟನೆ ನೆರವೇರಿಸಿದರು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಂ. ಮಧುಕರ ಹೆಬ್ಬಾರ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ದ.ಕ.ಸ.ಹಾ.ಒಕ್ಕೂಟದ ನಿರ್ದೇಶಕರುಗಳಾದ ನಿರಂಜನ್ ಬಾವಂತಾಬೆಟ್ಟು, ಪದ್ಮನಾಭ ಶೆಟ್ಟಿ ಅರ್ಕಜೆ, ಕೆ. ನಾರಾಯಣ ಪ್ರಕಾಶ್ ಪಾಣಾಜೆ, ಶ್ರೀಮತಿ ಸವಿತ ಎನ್, ಶೆಟ್ಟಿ, ದ.ಕ.ಸ.ಹಾ.ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಅಶೋಕ, ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷೆ  ಜಯ ಮೋನಪ್ಪ ಗೌಡ, ಬೆಳ್ತಂಗಡಿಯ ವಿಸ್ತರಣಾಧಿಕಾರಿ ಆದಿತ್ಯ ಸಿ., ಪಶು ವೈದ್ಯ ಡಾ| ಗಣಪತಿ ಬಿ.ಎಂ., ಮೊದಲದವರು ಭಾಗವಹಿಸಿದ್ದರು. ಧರ್ಮಸ್ಥಳ ಹಾ. ಉ. ಸ. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಾರಿಯಮ್ಮ ಪಿ. ಪಿ., ಉಪಾಧ್ಯಕ್ಷ ಅವಿನಾಶ್ ಶೆಟ್ಟಿ, ವಿ ಜೆ. ಬಾಬು, ಉಮೇಶ್ ಎಸ್., ಕೆ. ವಿ. ದೇವಸ್ಯ, ಪ್ರಭಾಕರ ಗೌಡ, ಕಾವೇರಿ, ಪಿ. ನೀಲಮ್ಮ, ಕೆ. ಯು. ಜೋಸೆಫ್, ಪಿ. ನಾರಾಯಣಿ, ಟಿ. ವಿ. ದೇವಸ್ಯ, ಪದ್ಮ ಗೌಡ, ಸಂಘದ ಸದಸ್ಯರು,ಸಿಬ್ಬಂದಿಗಳು ನಾಗರೀಕರು ಉಪಸ್ಥಿತರಿದ್ದರು.

Exit mobile version