ಸಾವ್ಯ: ಹಿಂದೂ ಜಾಗರಣ ವೇದಿಕೆ ವೇಣೂರು ತಾಲೂಕು ಸಾವ್ಯ ಘಟಕ ಮತ್ತು ಪರಿವಾರ ಸಂಘಟನೆ ಹಾಗೂ ದಾನಿಗಳ ನೇತೃತ್ವದಲ್ಲಿ ಸಾವ್ಯ ಎಂಬಲ್ಲಿ ಶೋಭಾ ಮತ್ತು ಅಂಗವಿಕಲ ಒಬ್ಬಂಟಿ ಮಗಳು ಇದ್ದು ತೀರ ಬಡ ಕುಟುಂಬವಾಗಿದ್ದು ಇವರಿಗೆ ನೂತನ ಮನೆ ನಿರ್ಮಿಸಲು ಗುದ್ದಲಿ ಪೂಜೆಯನ್ನು ನೆರವೆರಿಸಲಾಯಿತು.
ಈ ಸಂಧರ್ಭದಲ್ಲಿ ಹಿಂ.ಜಾ.ವೇ.ಪುತ್ತೂರು ಜಿಲ್ಲಾ ಸಂಯೋಜಕ್ ಜಗದೀಶ್ ನೆತ್ತರಕೆರೆ ,ಜಿಲ್ಲಾ ಪ್ರಮುಖರು, ವೇಣೂರು ತಾಲೂಕು ಪ್ರಮುಖರು ಹಾಗೂ ಸಾವ್ಯ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರು ರವಿ ಪೂಜಾರಿ , ಪಂಚಾಯತ್ ಸದಸ್ಯರು ಹರೀಶ್ ಹೆಗ್ಡೆ ಹಾಗೂ ಪರಿವಾರ ಸಂಘಟನೆಯ ಪ್ರಮುಖರು ಮತ್ತಿತರರು ಉಪಸ್ಥಿತರಿದ್ದರು.