Site icon Suddi Belthangady

ವೇಣೂರು: ಸಾರ್ವಜನಿಕ ಶಾರದೋತ್ಸವಕ್ಕೆ ಚಾಲನೆ


ವೇಣೂರು: ಶ್ರೀ ಶಾರದಾ ಸೇವಾ ಟ್ರಸ್ಟ್ ವತಿಯಿಂದ  ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 18ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವಕ್ಕೆ ಅ. 4ರಂದು ಚಾಲನೆ ದೊರೆಯಿತು.

ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅವರು ಉದ್ಘಾಟನೆ ನೆರವೇರಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಉದ್ಯಮಿ ಆನಂದ ಶೆಟ್ಟಿ ಮಂಗಳೂರು, ವಸಂತ ಪೂಜಾರಿ ಮಂಜಿಲ, ಗ್ರಾ.ಪಂ. ಅಧ್ಯಕ್ಷ ನೇಮಯ್ಯ ಕುಲಾಲ್, ವಿನಯ ಹೆಗ್ಡೆ ನಾರಾವಿ, ಪ್ರವೀಣ್ ಕುಮಾರ್, ವೇಣೂರು ಠಾಣೆಯ ಪೊಲೀಸ್ ಉಪನಿರೀಕ್ಷಕಿ ಸೌಮ್ಯ ಜೆ., ಗೌರಮ್ಮ, ಸುಂದರ ಹೆಗ್ಡೆ, ಡಾ| ಶಾಂತಿಪ್ರಸಾದ್, ಗಣೇಶ್ ನಾರಾಯಣ ಪಂಡಿತ್, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ.ಯನ್. ಪುರುಷೋತ್ತಮ ರಾವ್, ಶ್ರೀ ಶಾರದಾ ಸೇವಾ ಟ್ರಸ್ಟ್‌ನ ಅಧ್ಯಕ್ಷ ರಾಜೇಶ್ ಪೂಜಾರಿ ಕೊಪ್ಪದಬಾಕಿಮಾರು, ಕಾರ್ಯದರ್ಶಿ ಸತೀಶ್ ಚಿಗುರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ವಿವಿಧ ತಂಡಗಳಿಂದ ಭಜನೆ ಕಾರ್ಯಕ್ರಮ ಜರುಗಿತು.

Exit mobile version