ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಮಹಿಳಾ ಘಟಕದ ಜೋಡೋ ಯಾತ್ರೆಯಲ್ಲಿ ಭಾಗವಹಿಸುವ ಬಗ್ಗೆ ಸಮಾಲೋಚನಾ ಸಭೆ

0

ಬೆಳ್ತಂಗಡಿ: ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ರವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯು ಕರ್ನಾಟಕಕ್ಕೆ ತಲುಪಿದ್ದು ಈ ಯಾತ್ರೆಯಲ್ಲಿ ಅ.7ರಂದು ರಂದು ಮಂಡ್ಯಕ್ಕೆ “ಪ್ರಿಯಾಂಕ ಗಾಂಧಿ” ಭಾಗವಹಿಸಲಿದ್ದು,ಯಾತ್ರೆಯಲ್ಲಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದಿಂದ ಭಾಗವಹಿಸುವ ಸಲುವಾಗಿ ಸಮಾಲೋಚನಾ ಸಭೆಯು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ
ಅ.3 ರಂದು  ನಡೆಯಿತು.

ಈ ಸಭೆಯಲ್ಲಿ ಕೆ.ಪಿ.ಸಿ.ಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಕಲಾ ದೀಪಕ್ ರಾವ್ ರವರು ಭಾಗವಹಿಸಿದ್ದರು, ಹಿಂದುಳಿದ ವರ್ಗಗಳ ಕಾರ್ಯದರ್ಶಿ ಗಣೇಶ್ ಪೂಜಾರಿ, ಬ್ಲಾಕ್ ಕಾಂಗ್ರೆಸ್ ನಗರ ಸಮಿತಿಯ ಅಧ್ಯಕ್ಷರಾದ ಶೈಲೇಶ್ ಕುಮಾರ್, ನಗರ ಮಹಿಳಾ ಘಟಕದ ಅಧ್ಯಕ್ಷರಾದ ವಂದನಾ ಭಂಡಾರಿ, ಗ್ರಾಮೀಣ ಮಹಿಳಾ ಘಟಕದ ಅಧ್ಯಕ್ಷರಾದ ನಮಿತಾ, ಅಲ್ಪಸಂಖ್ಯಾತ ನಗರ ಘಟಕದ ಅಧ್ಯಕ್ಷರಾದ ಕೆ.ಸಲೀಮ್, ಮೀನಾ ಟೆಲಿಸ್,ಡಿ.ಸಿ.ಸಿ. ಸದಸ್ಯರಾದ ಶ್ರೀಮತಿ. ಹಾಜಿರಾ,ಶ್ರೀಮತಿ.ಶೋಬಾ ನಾರಾಯಣ ಗೌಡ,ಶ್ರೀಮತಿ ಸೌಮ್ಯ ಲಾಯ್ಲ, ಶ್ರೀಮತಿ. ಡಯಾನಾ ದಾಸ್, ಶ್ರೀಮತಿ.ಸಿಂದೂ ಡೆನ್ನಿಸ್,ಶ್ರೀಮತಿ. ಮಮತಾ,ಶ್ರೀಮತಿ.ಸರಿತಾ ಪಾರೆಂಕಿ,ಸಾಯಿರಾ ಬಾನು, ಮಹಮ್ಮದ್ ರಫೀ ಬೆಳ್ತಂಗಡಿ,ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಮ್ ಗೇರುಕಟ್ಟೆ,ಸಂತೋಷ್ ಕುಮಾರ್ ಹಾಜರಿದ್ದರು.

ನಮಿತಾ ಸ್ವಾಗತಿಸಿ, ಹಾಜಿರಾ ವಂದಿಸಿದರು.

LEAVE A REPLY

Please enter your comment!
Please enter your name here