ಕರ್ನಾಟಕ ತುಳು ಸಾಹಿತ್ಯ ಅಕಾಡಮಿ, ಶ್ರೀಮತಿ ಸಂದ್ಯಾರವರಿಗೆ “ಬಲೆ ತುಳು ಕಲ್ಪುಗ” ಪ್ರಶಸ್ತಿ

0

ಕರ್ನಾಟಕ ತುಳು ಸಾಹಿತ್ಯ ಅಕಾಡಮಿ   2021ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ  ಬಹುಮಾನ ಸಮಾರಂಭ  ಮತ್ತು ವಿಶೇಷ ಸಾಧಕರಿಗೆ ರಾಜ್ಯ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ವಾಣಿ ಆಂಗ್ಲ ಮಾಧ್ಯಮ ಶಾಲೆಯ ತುಳು ಭಾಷೆಯ ಶಿಕ್ಷಕಿ ಶ್ರೀಮತಿ ಸಂದ್ಯಾ ಜಯಪ್ರಕಾಶ್  ಶೆಟ್ಟಿಯವರಿಗೆ  “ಬಲೆ ತುಳು ಕಲ್ಪುಗ”  ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಇವರು ಪ್ರಸ್ತುತ ಬೆಳ್ತಂಗಡಿ ವಾಣಿ ಆಂಗ್ಲ  ಮಾಧ್ಯಮ ಪ್ರೌಢ  ಶಾಲೆಯಲ್ಲಿ ತುಳು ಭಾಷೆಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗೇರುಕಟ್ಟೆ ಕಳಿಯ ಗ್ರಾಮದ ಕೊರಂಜ ನಿವಾಸಿಯಾಗಿದ್ದು, ಇವರು  ಸುದ್ದಿ ವಾರ ಪತ್ರಿಕೆ ಮತ್ತು ಕನ್ನಡ ದಿನಪತ್ರಿಕೆ ವಿತರಕರಾದ ಜಯಪ್ರಕಾಶ್ ಶೆಟ್ಟಿ ಯವರ ಪತ್ನಿಯಾಗಿರುತ್ತಾರೆ.

LEAVE A REPLY

Please enter your comment!
Please enter your name here