Site icon Suddi Belthangady

ನೆರಿಯ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ

ನೆರಿಯ:  ವಿಶ್ವ ಹಿಂದೂ ಪರಿಷತ್ ಬಜರಂಗದಳ ಗ್ರಾಮ ಸಮಿತಿ ನೆರಿಯ ಇದರ ಆಶ್ರಯದಲ್ಲಿ  ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ಸೆ.25ರಂದು ಬೋವಿನಡಿ ರಾಮ್ ಕುಮಾರ್ ರವರ ಗದ್ದೆಯಲ್ಲಿ ನಡೆಯಿತು. ಗದ್ದೆಯ ಮಾಲೀಕ, ನೆರಿಯ ಗ್ರಾಹಕರ ಸಹಕಾರಿ ಸಂಘದ ಅಧ್ಯಕ್ಷರು ರಾಮ್ ಕುಮಾರ್ ಬೋವಿನಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯೆ ವೇದಾವತಿ, ವೈದ್ಯೆ ಡಾ ಕು. ನವ್ಯ,  ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ತಾಲೂಕು ಉಪಾಧ್ಯಕ್ಷ ಸತೀಶ್ ಕುಳೆನಾಡಿ, ನೆರಿಯ ವಿಶ್ಪವ ಹಿಂದೂ ಪರಿಷತ್ ಅಧ್ಯಕ್ಷ ಮಹೇಶ್ ಗೌಡ ಅಣಿಯೂರು ಉಪಸ್ಧರಿದ್ದರು.

ಸಂಜೆ ನಡೆದ  ಸಮಾರೋಪ ಸಮಾರಂಭದಲ್ಲಿ  ಶಾಸಕ ಹರೀಶ್ ಪೂಂಜ ರವರು ಉಪಸ್ಧಿತಿಯಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ನಿಟ್ಟೆ ಕಾಲೇಜು ಉಪನ್ಯಾಸಕ ಪುನೀತ್ ಬಿ.ಆರ್,  ಡಾಕ್ಟರ್ ನವ್ಯ,  ವಿಶ್ಪ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ,  ತಾಲೂಕು ಉಪಾಧ್ಯಕ್ಷ ಸತೀಶ್ ಕುಳೆನಾಡಿ, ನೆರಿಯ ವಿಶ್ಪ ಹಿಂದೂ ಪರಿಷತ್ ಅಧ್ಯಕ್ಷ ಮಹೇಶ್ ಗೌಡ ಅಣಿಯೂರು, ಹಾಗೂ ಕಾರ್ಯಕರ್ತರು ಉಪಸ್ಧರಿದ್ದರು.

Exit mobile version