ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ

0

ಮಡಂತ್ಯಾರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2021-22 ನೇ ಸಾಲಿನ ಮಹಾಸಭೆಯು ಸೆ 24 ರಂದು ವಿಶ್ವಕಮ೯ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಕೆ. ಅರವಿಂದ ಜೈನ್‌ ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಸಂಘವು 2021-22 ನೇ ಆಥಿ೯ಕ ವಷ೯ದಲ್ಲಿ 4739 ಸದಸ್ಯ ಬಲ ಹೊಂದಿದ್ದು ಪಾಲು ಬಂಡವಾಳವು 2.92 ಕೋಟಿ, 57.10 ಕೋಟಿ ಠೇವಣಿ , ರೂ 5.76 ಕೋಟಿ ನಿಧಿ ಹೊಂದಿದ್ದು 51.78 ಕೋಟಿ ಸಾಲ ಹೊರ ಬಾಕಿಯಿದೆ. ಶೇಕಡ 95 ರಷ್ಟು ಸಾಲ ವಸೂಲಾತಿ ಆಗಿದ್ದು ಈ ಹಿಂದಿನಂತೆ ಲೆಕ್ಕ ಪರಿಶೋಧನೆಯಲ್ಲಿ ʼAʼ ಶ್ರೇಣಿ ದೊರಕಿರುತ್ತದೆ. ಸಂಘದ ಸದಸ್ಯರಿಗೆ ವರದಿ ವರ್ಷದಲ್ಲಿ ಶೇಕಡ 16 ರಷ್ಟು ಡಿವಿಡೆಂಡ್‌ ಘೋಷಿಸಲಾಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಶ್ರೀಮತಿ ಧನಲಕ್ಷ್ಮೀ, ನಿರ್ದೇಶಕರಾದ ಕೆ.ಬಿ.ಮಹಾವೀರ ಬಲ್ಲಾಳ್‌, ಎಚ್‌  ಧರ್ಣಪ್ಪ ಗೌಡ, ಅಬ್ದುಲ್‌ ರಹಿಮಾನ್‌ ಪಡ್ಪು, ಕಿಶೋರ್‌ ಕುಮಾರ್‌ ಶೆಟ್ಟಿ, ಕುಮಾರ ನಾಯ್ಕ, ಪದ್ಮನಾಭ ಸಾಲಿಯಾನ್‌, ಜೋಯೆಲ್‌ ಮೆಂಡೋನ್ಸಾ, ರಮೇಶ್‌, ಶ್ರೀಮತಿ ತುಳಸಿ ಪೂಜಾರಿ, ಶ್ರೀಮತಿ ಉಷಾಲತಾ ಉಪಸ್ಥಿತರಿದ್ದರು.

2021-22 ನೇ ಸಾಲಿನ ವರದಿಯನ್ನು ಮತ್ತು ಲೆಕ್ಕ ಪತ್ರಗಳನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾದಿಕಾರಿ ಜೋಕಿಂ ಡಿಸೋಜ ಮಂಡಿಸಿದರು. ಕಾರ್ಯಸೂಚಿಯಲ್ಲಿರುವ ವಿಷಯಗಳನ್ನು ಸಿಬ್ಬಂದಿಯವರಾದ ಗಣೇಶ್‌, ಸವಿನ್‌ , ಕಿಶನ್‌ ಕುಮಾರ್‌ ವಾಚಿಸಿದರು. ಮಹಿಳಾ ಸಿಬ್ಬಂದಿಗಳು ಪ್ರಾರ್ಥಿಸಿ, ಶ್ರೀಮತಿ ಪೂರ್ಣಿಮಾರವರು ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕರಾದ ಅಬ್ದುಲ್‌ ರಹಿಮಾನ್‌ ಪಡ್ಪು ಧನ್ಯವಾದವಿತ್ತರು.

ಕಾರ್ಯಕ್ರಮದ ಕೃಷಿ ಅಧಿಕಾರಿ ಚಿದಾನಂದ ಹೂಗಾರ್‌ ಕೃಷಿ ಸರ್ವೆ ಬಗ್ಗೆ ಮಾಹಿತಿ ನೀಡಿದರು. ಟಿ. ವಿ. ಶ್ರೀದರ್‌ ರಾವ್‌ರವರು ಗುಂಪು ವಿಮೆ ಮತ್ತು ಅಫಘಾತ ವಿಮೆಯ ಬಗ್ಗೆ ಮಾಹಿತಿಯಿತ್ತರು. ಸುಮಾರು 1200 ರಕ್ಕೂ ಮಿಕ್ಕಿ ಸದಸ್ಯರು ಹಾಜರಿದ್ದರು.

LEAVE A REPLY

Please enter your comment!
Please enter your name here