Site icon Suddi Belthangady

ಕುವೆಟ್ಟು: ಕೃಷ್ಣಪ್ಪ ಮೂಲ್ಯ ಸಬರಬೈಲು ನಿಧನ

ಕುವೆಟ್ಟು: ಸಬರಬೈಲು ಶಾಲಾ ಬಳಿ ನಿವಾಸಿ ಕೃಷ್ಣಪ್ಪ ಮೂಲ್ಯ ಸಬರಬೈಲು ಅಲ್ಪ ಕಾಲದ ಅಸೌಖ್ಯದಿಂದ ಸೆ.24 ರಂದು  ನಿಧನರಾದರು .

ಮೃತರು ಪತ್ನಿ ಕವಿತ, ಎರಡು ಗಂಡು ಮಕ್ಕಳು ಮತ್ತು ಕುಟುಂಬಸ್ತರನ್ನು ಬಂದು ಬಳಗದವರನ್ನು ಅಗಲಿದ್ದಾರೆ.

ಮೃ ತರು ಹಲವು ವರ್ಷಗಳಲ್ಲಿ ವಿದೇಶದಲ್ಲಿ ಉದ್ಯೋಗದಲ್ಲಿ ಕೆಲವು ವರ್ಷಗಳ ಹಿಂದೆ ಕುವೆಟ್ಟು ಗ್ರಾಮದ ಸಬರಬೈಲು ಶಾಲಾ ಬಳಿ ವಾಸ್ತವ್ಯ ಇದ್ದು ಸ್ಥಳೀಯ ಮದ್ದಡ್ಕ ಆದರ್ಶ ಯುವಕ ಮಂಡಲ ಹಾಗೂ ವೆಲ್ಕಂ ಯೂತ್ ಕ್ಲಬ್ ಮದ್ದಡ್ಕ ಇದರ ಸಕ್ರಿಯ ಸದಸ್ಯರಾಗಿ ಮದ್ದಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಮದ್ದಡ್ಕ ಇದರ 2ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಮೃತರ ಮನೆಗೆ ಮಾಜಿ ಶಾಸಕ ಕೆ ವಸಂತ ಬಂಗೇರ ಮದ್ದಡ್ಕ ಪರಿಸರದ ಬಂದು ಬಳಗ ಮದ್ದಡ್ಕ ಗಣೇಶೋತ್ಸವ ಸೇವಾ ಸಮಿತಿಯ ಪಧಾದಿಕಾರಿಗಳು ಸ್ಥಳೀಯರು ಮ್ರತರ ಅಂತಿಮ ದರ್ಶನ ಪಡೆದರು.

Exit mobile version