Site icon Suddi Belthangady

ತೋಟತ್ತಾಡಿ: ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತೋಟತ್ತಾಡಿ ನಿವಾಸಿ ಚಂದ್ರ ಶೇಖರ್ ಪೂಜಾರಿ: ಚಿಕಿತ್ಸೆ ಫಲಕಾರಿಯಾಗದೆ ನಿಧನ

ನೆರಿಯ: ಸ್ವಸಹಾಯ ಸಂಘದ ಹೆಸರಿನಲ್ಲಿ ಸಾಲ ಪಡೆದು ಸಾಲ ಕಟ್ಟದೆ ಇದ್ದುದನ್ನು ಪ್ರಶ್ನಿಸಿದ ತೋಟತ್ತಾಡಿ ನಿವಾಸಿ ಚಂದ್ರ ಶೇಖರ್ ಪೂಜಾರಿ(24) ಎಂಬವರಿಗೆ ತಂಡದ ಸದಸ್ಯರು ಬೆದರಿಕೆ ಹಾಕಿದ್ದರಿಂದ ಮನನೊಂದು  ಆತ್ಮಹತ್ಯೆಗೆ ಯತ್ನಿಸಿ, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೆ.23 ರಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

ಮೃತರು ತಂದೆ ಆನಂದ ಪೂಜಾರಿ, ತಾಯಿ ಪುಷ್ಪ, ಸಹೋದರರು ವಿಶ್ವನಾಥ, ವಿನಯ್, ಸಹೋದರಿ ಭವ್ಯ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Exit mobile version