ಬೆಳ್ತಂಗಡಿ: ಕಥೋಲಿಕ್ ಸ್ತ್ರೀಮಂಡಳಿ ಬೆಳ್ತಂಗಡಿ ವಲಯ ಇದರ ಸಹಭಾಗಿತ್ವದಲ್ಲಿ ಮೊಂತಿ ಹಬ್ಬ(ತೆನೆ ಹಬ್ಬ)ವನ್ನು ಬೆಳ್ತಂಗಡಿ ಹೋಲಿ ರಿಡಿಮರ್ ಅಡಿಟೋರಿಯಂ ನಲ್ಲಿ ಸೆ.18ರಂದು ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ಚರ್ಚ್ ಪ್ರಧಾನ ಗುರುಗಳಾದ ವಂ|ಫಾ| ಜೋಸೆಫ್ ಕರ್ಡೋಜಾ ನೆರವೇರಿಸಿ, ಸಂದೇಶ ನೀಡಿದರು.
ವೇದಿಕೆಯಲ್ಲಿ ಕಥೋಲಿಕ್ ಸ್ತ್ರೀಮಂಡಳಿ ಬೆಳ್ತಂಗಡಿ ವಲಯ ಅಧ್ಯಕ್ಷರಾದ ಗ್ರೇಸಿ ಲೋಬೊ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಂಗಳೂರು ಪ್ರಾದ್ಯಾಪಕಿ ಐರಿನ್ ರೆಚಿಲ್ಲೊ ಸಾಮಾಜಿಕ ಕ್ಷೇತ್ರದಲ್ಲಿ ಸ್ತ್ರೀಯರ ಪಾತ್ರ ಎಂಬ ವಿಷಯವನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಉಜಿರೆ ಚರ್ಚ್ ಆಧ್ಯಾತ್ಮಿಕ ನಿರ್ದೇಶಕರು ವಂ|ಫಾ| ಜೇಮ್ಸ್ ಡಿಸೋಜ, ಬೆಳ್ತಂಗಡಿ ಹೋಲಿ ರೆಡಿಮರ್ ಇಂಗ್ಲಿಷ್ ಮೀಡಿಯಂ ಶಾಲೆಯ ಮುಖ್ಯೋಪಾಧ್ಯಾಯರು ವಂ|ಫಾ| ಕ್ಲಿಫರ್ಡ್ ಸೈಮನ್ ಪಿಂಟೋ, ಕಥೊಲಿಕ್ ಸ್ತ್ರೀಮಂಡಳಿ ಕಾರ್ಯದರ್ಶಿ ಆಶು ಜುಲಿಯೆಟ್ ಕ್ರಾಸ್ತಾ, ಧರ್ಮ ಭಗಿನಿ ಜೆಸಿಂತಾ ಬರೆಟ್ಟೋ ಸಂತ ತೆರೇಸಾ ಕಾನೈಂಟ ಬೆಳ್ತಂಗಡಿ, ವಿನ್ಸೆಂಟ್ ಟಿ ಡಿಸೋಜ ಆಯೋಗದ ಸಂಚಾಲಕರು ಬೆಳ್ತಂಗಡಿ, ಉಪಸ್ಥಿತರಿದ್ದರು.
ಪ್ರಾರ್ಥನೆ ಬಳಿಕ ಅಧ್ಯಕ್ಷೆ ಗ್ರೇಸಿ ಲೋಬೋರವರು ಪ್ರಾಸ್ತಾವಿಕ ನುಡಿಯೊಂದಿಗೆ ಸರ್ವರನ್ನು ಸ್ವಾಗತಿಸಿದರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ನಂತರ ಲಕ್ ಡಿಪ್ ಡ್ರಾ ಬಹುಮಾನ ವಿತರಣೆ ಹಾಗೂ ಇತರ ಚಟುವಟಿಕೆಗಲು ನಡೆಯಿತು. ಬೆಳ್ತಂಗಡಿ 400ಕ್ಕೂ ಹೆಚ್ಚು ಕಥೋಲಿಕ್ ಸ್ತ್ರೀಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕು| ತಿಯೊಫಿಲಾ ಶಿಕ್ಷಕಿ ಹಾಗೂ ಸಹ ಕಾರ್ಯದರ್ಶಿ ಜೆತ್ರುಡ್ ಡಿಸೋಜ ಕಾರ್ಯಕ್ರಮವನ್ನು ನಿರೂಪಿಸಿದರು. ಆಶು ಜೂಲಿಯೆಟ್ ಕ್ರಾಸ್ತಾ ವಂದಿಸಿದರು.