ಬೆಳ್ತಂಗಡಿ: 2022ನೇ ಸಾಲಿನ ಬೆಳ್ತಂಗಡಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಸೆ.20ರಂದು ನಡೆಯಿತು.
ಗೌರವಾಧ್ಯಕ್ಷರಾಗಿ ಮುಗುಳಿ ನಾರಾಯಣ ರಾವ್, ಅಧ್ಯಕ್ಷರಾಗಿ ಕೆಲ್ಲಗುತ್ತು ಮುರಳೀಧರ, ಉಪಾಧ್ಯಕ್ಷರುಗಳಾಗಿ ಕೆರಳೇಕೊಡಿ ಕರುಣಾಕರ ಬಂಗೇರ, ಸಂಜಯನಗರ ಸಂಜೀವ ಎನ್, ಬೆಳ್ತಂಗಡಿ ಸುರೇಂದ್ರ ಕೋಟ್ಯಾನ್, ಬೆಳ್ತಂಗಡಿ ಶಕ್ತಿ ಮೆಡಿಕಲ್ಸ್ ನ ಜಗದೀಶ್ ಡಿ , ಬೆಳ್ತಂಗಡಿ ದೊಡ್ಡಮನೆ ಸತೀಶ್ ಶೆಟ್ಟಿ ಇವರನ್ನು ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ನಾರಾಯಣ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಸುದ್ದಿ ಬಿಡುಗಡೆ ವರದಿಗಾರ ತುಕರಾಮ್, ಹರೀಶ್ ಕೆಲ್ಲಗುತ್ತು, ಸಂತೋಷ್ ಕರ್ಕೇರ, ಭೋಜರಾಜ್, ಕೃಷ್ಣಪ್ಪ ಕುಲಾಲ್ ಹಾಗೂ ಕೋಶಾಧಿಕಾರಿಯಾಗಿ ಬಿ.ಹೆಚ್ ರಾಜು ಇವರು ಆಯ್ಕೆಯಾದರು.