Site icon Suddi Belthangady

ಉಜಿರೆಯಲ್ಲಿ ಚಿನ್ಮಯಿ ಇಂಡಸ್ಟ್ರಿ ಉದ್ಘಾಟನೆ


ಉಜಿರೆ:  ಇಲ್ಲಿಯ ಬೆಳಾಲು ರಸ್ತೆಯ ಉಜಿರೆ ಸಹಕಾರ ಸಂಘದ ಬಳಿ ಸಿಮೆಂಟ್ ಪೀಠೋಪಕರಣಗಳ ತಯಾರಿಕೆಯ ಚಿನ್ಮಯಿ ಇಂಡಸ್ಟ್ರಿ ಸೆ. 17 ರಂದು ಶುಭಾರಂಭ ಗೊಂಡಿತು.

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಯ ಉದ್ಘಾಟಿಸಿದರು. ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್,  ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ, ಉಪಾಧ್ಯಕ್ಷ ರವಿ ಕುಮಾರ್ ಬರೆಮೇಲು, ಇನ್ನಿತರ ಗಣ್ಯರು ಸಹಕಾರ ಸಂಘದ ನಿರ್ದೇಶಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮಾಲಕರಾದ ಇಚ್ಚಿಲ ಸುಂದರ ಗೌಡ ಮತ್ತು ಅಶ್ವಥ್ ಇ. ಎಸ್. ಆಗಮಿಸಿದ ಗಣ್ಯರನ್ನು ಸ್ವಾಗತಿಸಿ ಗೌರವಿಸಿದರು.

Exit mobile version