Site icon Suddi Belthangady

ಸೌತಡ್ಕ ದೇವಸ್ಥಾನಕ್ಕೆ ಕೆನರಾ ಬ್ಯಾಂಕ್ ವತಿಯಿಂದ ರೂ 1 ಲಕ್ಷ 25 ಸಾವಿರ ಮೌಲ್ಯದ ಸೋಲಾರ್ ಬಿಸಿ ನೀರ ಸಿಸ್ಟಮ್ ಕೊಡುಗೆ

ಕೊಕ್ಕಡ: ಬಯಲು ಆಲಯವೆಂದೇ ಪ್ರಸಿದ್ಧಿ ಪಡೆದ ಸೌತಡ್ಕ ದೇವಸ್ಥಾನಕ್ಕೆ ಕೆನರಾ ಬ್ಯಾಂಕ್ ವತಿಯಿಂದ ಸೆಲ್ಕೋ ಕಂಪೆನಿಯ ರೂ 1 ಲಕ್ಷ 25 ಸಾವಿರ ಮೌಲ್ಯದ ಸೋಲಾರ್ ಬಿಸಿ ನೀರ ಸಿಸ್ಟಮ್ ನ್ನು ಸೆ.13 ರಂದು ಕೊಡುಗೆಯಾಗಿ ನೀಡಲಾಯಿತು.

ಕೆನರಾ ಬ್ಯಾಂಕ್  ಪುತ್ತೂರು ಡಿವಿಷನ್ ಎ ಜಿ ಎಂ   ನರೇಂದ್ರ ರೆಡ್ಡಿ , ಕೊಕ್ಕಡ  ಶಾಖಾ ವ್ಯವಸ್ಥಾಪಕ ಅಂಕಿತ್ ಸಿಂಗ್  ,  ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ,  ಸದಸ್ಯರಾದ ಪುರಂದರ ಕಡೀರ,  ಪ್ರಶಾಂತ್ ಪೂವಾಜೆ,  ಯಶೋಧ ಉಮೇಶ್ ಶಬರಾಡಿ,  ನವೀನ ಕಜೆ, ವಿಠ್ಠಲ ಕುರ್ಲೆ, ಕಾರ್ಯನಿರ್ವಾಹಣಾಧಿಕಾರಿ  ದಯಾನಂದ ಹೆಗ್ಡೆ, ಅರ್ಚಕರಾದ  ಗುರುರಾಜ್ ಉಪ್ಪಾರ್ಣ, ಹಿರಿಯರಾದ  ಕುಶಾಲಪ್ಪ ಗೌಡ ಪೂವಾಜೆ ಉಪಸ್ಥಿತರಿದ್ದರು.

Exit mobile version