ನಾಳ : ಕಾಸರಗೋಡು ಜಿಲ್ಲೆಯ ಬಾಯಾರು ಭಕ್ತಾದಿಗಳು ಧರ್ಮಸ್ಥಳ ಪಾದಯಾತ್ರೆ ಸಂದರ್ಭದಲ್ಲಿ ಸೆ.11 ರಂದು ನಾಳ ಶ್ರೀ ದುರ್ಗಾಪರಮೇಶ್ವರಿ ದೇವರ ದರ್ಶನ ಪಡೆದರು.
ಕಳೆದ 15 ವರ್ಷಗಳಿಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಭೇಟಿ ನೀಡುತ್ತಾರೆ. 2014 ರಲ್ಲಿ ನಾಳ ದೇವಸ್ಥಾನದಲ್ಲಿ ನಡೆದ ಬ್ರಹ್ಮ ಕಲಶೋತ್ಸಹ ಸಂದರ್ಭದಲ್ಲಿ ಈ ತಂಡದ ಭಕ್ತಾದಿಗಳು ಶ್ರಮದಾನದಲ್ಲಿ ಭಾಗವಹಿಸಿದ್ರುದ. ಹಾಗೂ ಕಳೆದ 3 ವರ್ಷಗಳ ಹಿಂದೆ ನಾಳ ಕ್ಷೇತ್ರಕ್ಕೆ ಸುಮಾರು 10 ಸಾವಿರ ಮೌಲ್ಯದ ಕಂಚಿನ ದೀಪವನ್ನು ಕೊಡುಗೆ ನೀಡಿದ್ದಾರೆ.
ಕಾಸರಗೋಡು ಸುರೇಶ್ ಭಟ್ ಬಾಯರು ನೇತೃತ್ವದಲ್ಲಿ ಕಾಲ್ನಡಿಗೆಯಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ದೇವರ ದರ್ಶನ ಪಡೆಯಲು ಬರುವ ಸಮಯದಲ್ಲಿ ನಾಳ ದೇವಸ್ಥಾನದಲ್ಲಿ 41 ಜನ ಭಕ್ತಾದಿಗಳು ರಾತ್ರಿ ವೇಳೆ ನಾಳ ದೇವಸ್ಥಾನದಲ್ಲಿ ತಂಗಿದ್ದರು. ನಾಳ ದೇವಸ್ಥಾನದ ವ್ಯವಸ್ಥಾಪನ ಸಮಿತಿ ವತಿಯಿಂದ ಭಕ್ತಾದಿಗಳಿಗೆ ರಾತ್ರಿ ಊಟದ ವ್ಯವಸ್ಥೆ ಮಾಡಿ,ಮರುದಿನ ದೇವಸ್ಥಾನದ ವತಿಯಿಂದ ಬಿಳ್ಕೋಟು ಶುಭ ಹಾರೈಸಿದರು.
ಕಾಲ್ನಡಿಗೆ ಭಕ್ತಾದಿಗಳು ಕೃತಜ್ಞತೆಯ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಸಮಿತಿ ಪದಾಧಿಕಾರಿಗಳು,ಸಿಬ್ಬಂದಿಗಳು ಉಪಸ್ಥಿತರಿದ್ದರು.