Site icon Suddi Belthangady

ಗುರುವಾಯನಕೆರೆಯಿಂದ ಬೆಳ್ತಂಗಡಿ ಮಿನಿ ವಿಧಾನ ಸೌಧದ ವರೆಗೆ ಮುಖ್ಯ ಹೆದ್ದಾರಿಯನ್ನು ಶೀಘ್ರ ವಾಗಿ ದುರಸ್ತಿಗೋಳಿಸುವಂತೆ ಎಸ್ ಡಿಟಿಯು ವತಿಯಿಂದ ತಹಶೀಲ್ದಾರ್ ಗೆ ಮನವಿ

ಬೆಳ್ತಂಗಡಿ: ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್  ವತಿಯಿಂದ ಗುರುವಾಯನಕೆರೆಯಿಂದ ಬೆಳ್ತಂಗಡಿ ವರೆಗೆ ಗುಂಡಿ ತುಂಬಿದ ರಸ್ತೆಯನ್ನು ದುರಸ್ತಿ ಗೊಳಿಸಲು ಆಗ್ರಹಿಸಿ ಬೃಹತ್ ವಾಹನ ಜಾಥಾ ಸೆ.12 ರಂದು ನಡೆಯಿತು.

ಗುರುವಾಯನಕೆರೆಯಿಂದ ಬೆಳ್ತಂಗಡಿ ಮಿನಿ ವಿಧಾನ ಸೌಧದ ವರೆಗೆ ವಾಹನ ಜಾಥ ನಡೆಸಿ ಮುಖ್ಯ ಹೆದ್ದಾರಿಯನ್ನು ಶೀಘ್ರ ವಾಗಿ ದುರಸ್ತಿಗೋಳಿಸುವಂತೆ ತಹಶೀಲ್ದಾರ್ ಗೆ ಮನವಿಯನ್ನು ನೀಡಿ, ಒಂದು ವಾರದಲ್ಲಿ ದುರಸ್ತಿ ಮಾಡದಿದ್ದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ನ ಜಿಲ್ಲಾಧ್ಯಕ್ಷ ಝಾಕೀರ್ ಹುಸೇನ್ ಉಳ್ಳಾಲ್ ಹಾಗೂ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.

Exit mobile version