Site icon Suddi Belthangady

ಗುರುವಾಯನಕೆರೆ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಗುರುವಾಯನಕೆರೆ: ಗುರುವಾಯನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು  ಸೆ.8 ರಂದು ಸಂಘದ ಜ್ಯೇಷ್ಠ ಸಭಾಭವನದಲ್ಲಿ ಜರುಗಿತು.

ಸಂಘದ ಅಧ್ಯಕ್ಷ, ನ್ಯಾಯವಾದಿ ಭಗೀರಥ ಜಿ ರವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 2021-22ನೇ ಸಾಲಿನಲ್ಲಿ ಸಂಘವು ರೂ.109ಕೋಟಿ ವ್ಯವಹಾರ ನಡೆಸಿ,ಈ ಸಾಲಿನಲ್ಲಿ ಒಟ್ಟು ರೂ 27 ಕೋಟಿ 92 ಲಕ್ಷ ಠೇವಣಿಯನ್ನು ಹೊಂದಿದ್ದು ಪಾವತಿಸಿದ ಸಾಲ ಒಟ್ಟು 18 ಕೋಟಿ 51 ಲಕ್ಷ ಇರುತ್ತದೆ. ಡಿ.ಸಿ.ಸಿ ಬ್ಯಾಂಕ್ ಮತ್ತು ಇತರ ಸಹಕಾರ ಸಂಘಗಳಲ್ಲಿ ಒಟ್ಟು 14 ಕೋಟಿ 11 ಲಕ್ಷ ಹೂಡಿಕೆ ಇರುತ್ತದೆ.ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಬೆಲೆ ಸಾಲವನ್ನು 263 ಮಂದಿ ಸದಸ್ಯರಿಗೆ 4 ಕೋಟಿ 13 ಲಕ್ಷವನ್ನು ವಿತರಿಸಲಾಗಿದೆ.ಅದೇ ರೀತಿ ಶೇಕಡ 3 ಬಡ್ಡಿ ದರದಲ್ಲಿ ಮಧ್ಯಮಾವಧಿ ಕೃಷಿ ಸಾಲವನ್ನು ಒಟ್ಟು 22 ಜನರಿಗೆ 56 ಲಕ್ಷ 64ಸಾವಿರ ನೀಡಿದ್ದು ಒಟ್ಟು 96 ಜನರ 2 ಕೋಟಿ ರೂಪಾಯಿ ಸಾಲ ಹೊರಬಾಕಿ ಇರುತ್ತದೆ. ರೂ.32.52.452 ನಿವ್ವಳ ಲಾಭ ಗಳಿಸಿದ್ದು, ಸದಸ್ಯರ ಮರುಪಾವತಿ ಕಡಿಮೆ ಮತ್ತುಲಾಭಾಂಶ ಕಡಿಮೆ ಇರುವುದರಿಂದ ಸದಸ್ಯರಿಗೆ ಶೇ.6.5 ಡಿವಿಡೆಂಡ್ ನೀಡುವುದಾಗಿ ಘೋಷಿಸಿದರು.

ಕಳೆದ ಶೈಕ್ಷಣಿಕ ಸಾಲಿನಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 19 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಸಂಘದ ಸದಸ್ಯರ ಮಕ್ಕಳಿಗೆ ನೀಡಲಾಯಿತು. ಅತೀ ಹೆಚ್ಚು ಪಿಗ್ಮಿ ಸಂಗ್ರಹಣೆ ಮಾಡಿದ ಆನಂದ ಕೋಟ್ಯಾನ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಕಲಾ ಎನ್ ವಾರ್ಷಿಕ ವರದಿ ಮಂಡಿಸಿದರು.  ಸಂಘದ ಉಪಾಧ್ಯಕ್ಷೆ ಸುಜಿತಾ.ವಿ.ಬಂಗೇರ ನಿರ್ದೇಶಕರುಗಳಾದ  ಸಚಿನ್ ಕುಮಾರ್ ನೂಜೋಡಿ,  ವಡಿವೇಲು, ಶಾರದಾ, ಗೋಪಿನಾಥ ನಾಯಕ್, ಭುಜಂಗ ಕೆ ಶೆಟ್ಟಿ, ಚಂದ್ರರಾಜ್, ಪುರಂದರ ಶೆಟ್ಟಿ, ಹರೀಶ್ಚಂದ್ರ,ಡಿ.ಸಿ.ಸಿ. ಪ್ರತಿನಿಧಿ ಸಿರಾಜುದ್ದೀನ್ ಸಂಘದ ಸದಸ್ಯರು, ಸಿಬ್ಬಂದಿಗಳು ಸಭೆಯಲ್ಲಿ  ಉಪಸ್ಥಿತರಿದ್ದರು.

ನಿರ್ದೇಶಕ ನಾರಾಯಣ ರಾವ್ ಮುಗುಳಿ ಧನ್ಯವಾದವಿತ್ತರು.

Exit mobile version