ಶಿಶಿಲ: ಹಿಂದೂ ಜಾಗರಣ ವೇದಿಕೆ ಶಿಶಿಲ ಇವರ ಆಶ್ರಯದಲ್ಲಿ ಸೆ.18ರಂದು ನಡೆಯಲಿರುವ “ಶಿಶಿಲದ ಕಂಡೊಡು ಒಂಜಿ ದಿನ “ಆಮಂತ್ರಣ ಪತ್ರಿಕೆ ಬಿಡುಗಡೆ ಆ.7ರಂದು ಶಿಶಿಲದಲ್ಲಿ ನಡೆಯಿತು. ಶ್ರೀನಿವಾಸಮೂಡೆತ್ತಾಯ ಅಧ್ಯಕ್ಷರು ಶಿಶಿಲೇಶ್ವರ ದೇವಸ್ಥಾನ ಇವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಕೊರಗಪ್ಪ ಪಡ್ಪು ಶಿಶಿಲದ ಕಂಡೊಡು ಕೆಸರ್ ಡ್ ಒಂಜಿದಿನ ಸಮಿತಿಯ ಅಧ್ಯಕ್ಷರಾದ ಕರುಣಾಕರ ಶಿಶಿಲ, ಹಿಂದೂ ಜಾಗರಣ ವೇದಿಕೆ ಶಿಶಿಲ ಇದರ ಅಧ್ಯಕ್ಷರಾದ ಆನಂದ ಕಂಡೆಚ್ಚರ್, ಕಾರ್ಯಕ್ರಮದ ಸಂಚಾಲಕರಾದ ಗಾಂಗಧರ ಶಿಶಿಲ, ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ರೂಪೇಶ್, ಹಿಂದೂ ಜಾಗರಣ ವೇದಿಕೆಯ ಸದಸ್ಯರಾದ ಶೋಭಿತ್ ಮೊದಲಾದವರು ಉಪಸ್ಥಿತರಿದ್ದರು.