Site icon Suddi Belthangady

ರಾಜ್ಯ ಪ್ರಶಸ್ತಿ ಸ್ವೀಕರಿಸಿದ ಬಂಗಾಡಿ ಶಾಲೆಯ ಮುಖ್ಯ ಶಿಕ್ಷಕ ಅಮಿತಾನಂದ ಹೆಗ್ಡೆ ಅವರಿಗೆ ಅದ್ದೂರಿ ಸ್ವಾಗತ

ಬಂಗಾಡಿ: ಸರಕಾರಿ ಉನ್ನತೀಕರಿಸಿದ ಹಿ.ಪ್ರಾ ಶಾಲೆ ಬಂಗಾಡಿಯ ಮುಖ್ಯ ಶಿಕ್ಷಕ ಅಮಿತಾನಂದ ಹೆಗ್ಡೆ  ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಬೆಂಗಳೂರಿನ ವಿಧಾನ ಸೌಧ ಬಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೆ. 5ರಂದು ಪ್ರಶಸ್ತಿ ಸ್ವೀಕರಿಸಿದರು.

     

ಪ್ರಶಸ್ತಿ ಸ್ವೀಕರಿಸಿ ಬೆಳ್ತಂಗಡಿಗೆ ಆಗಮಿಸಿದ ಅಮಿತಾನಂದ ಹೆಗ್ಡೆ ಅವರನ್ನು   ಬಂಗಾಡಿ ಶಾಲೆಯ ವರೆಗೆ ಮೆರವಣಿಗೆಯ ಮೂಲಕ  ಕರೆದುಕೊಂಡು ಬಂದು  ಅದ್ದೂರಿಯಾಗಿ  ಸ್ವಾಗತಿಸಲಾಯಿತು.

Exit mobile version