ಬೆಳ್ತಂಗಡಿ: ವಿಶಾಖಪಟ್ಟಣದ ಆಂಧ್ರ ವಿಶ್ವವಿದ್ಯಾನಿಲಯದ ಡಾ. ವೈ ವಿ.ಎಸ್ ಮೂರ್ತಿ ಸಭಾಂಗಣದಲ್ಲಿ ಜರಗಿದ್ದ ರಾಷ್ಟ್ರೀಯ ಮಟ್ಟದ ಭಾರತ್ ಎಜ್ಯುಕೇಶನ್ ಎಕ್ಸಲೆನ್ಸ್ ಅವಾರ್ಡ್ ಸಮಾರಂಭದಲ್ಲಿ ಯುವ ಆಚಾರ್ಯ ಪ್ರಶಸ್ತಿ ಮತ್ತು ಯುವ ಅದ್ಯಾಪಕಿ ಪ್ರಶಸ್ತಿಯನ್ನು ಕು. ಪ್ರಜ್ಞಾ ಇವರಿಗೆ ನೀಡಿ ಗೌರವಿಸಲಾಯಿತು.
ಇವರು ಬೆಂಗಳೂರಿನ ಆರ್. ಆರ್. ಶಿಕ್ಷಣ ಸಂಸ್ಥೆಯಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಹೆಚ್. ಓ. ಡಿ ಯಾಗಿ ಕಾರ್ಯನಿರ್ಹಿವಹಿಸುತ್ತಿದ್ದಾರೆ.
ಇವರು ಸವಣಾಲು ಗಣೇಶ್ ಎನ್ ಭಂಡಾರಿ ಇವರ ಪುತ್ರಿ.