Site icon Suddi Belthangady

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಮಹಾಸಭೆ

ಬೆಳ್ತಂಗಡಿ :ಶ್ರೀ ಗುರುದೇವ ವಿವಿದೋದ್ದೇಶ ಸಹಕಾರ ಸಂಘ ಬೆಳ್ತಂಗಡಿ ಇದರ 2021-22 ನೇ ಸಾಲಿನ ವಾರ್ಷಿಕ ಮಹಾಸಭೆ ಸೆ.4 ರಂದು ಶ್ರೀ ನಾರಾಯಣ ಗುರು ಸಂಕೀರ್ಣದ ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ಯನ್. ಪದ್ಮನಾಭ ಮಾಣಿಂಜೆ ಅಧ್ಯಕ್ಷತೆಯಲ್ಲಿ ನಡೆಯಿತು .

ಸಂಘದ ಉಪಾಧ್ಯಕ್ಷ ಭಗೀರಥ ಜಿ., ನಿರ್ದೇಶಕರುಗಳಾದ ಮಾಜಿ ಶಾಸಕ ಕೆ. ವಸಂತ ಬಂಗೇರ, ಸುಜಾತಾ ವಿ. ಬಂಗೇರ, ತನುಜಾ ಶೇಖರ್, ಸಂಜೀವ ಪೂಜಾರಿ, ಗಂಗಾಧರ ಮಿತ್ತಮಾರು, ಕೆ. ಪಿ. ದಿವಾಕರ, ಶೇಖರ ಬಂಗೇರ, ಜಗದೀಶ್ಚಂದ್ರ ಡಿ.ಕೆ, ಚಂದ್ರಶೇಖರ್, ಧಾರನೇಂದ್ರ ಕುಮಾರ್, ಆನಂದ ಪೂಜಾರಿ, ಡಾ ರಾಜಾರಾಮ್ ಕೆ. ಬಿ., ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶ್ವಥ್ ಕುಮಾರ್, ಮತ್ತು ವಿಶೇಷ ಅಧಿಕಾರಿ ಯಂ. ಮೋನಪ್ಪ ಪೂಜಾರಿ ಮಹಾ ಸಭಾ ನಡವಳಿಕೆಯನ್ನು ನಡೆಸಿದರು.

ಈ ಸಂದರ್ಭದಲ್ಲಿ ಸಾಧನೆ ಗೈದ ಏಕಲವ್ಯ ಪ್ರಶಸ್ತಿ ಪುರಸ್ಕಾರ ಗೊಂಡ ನಿತೀನ್ ಪೂಜಾರಿ, ಚಲನಚಿತ್ರ ನಿರ್ಮಾಪಕ ಸ್ಮಿತೇಶ್ ಬಾರ್ಯ, ಬರಹಗಾರ ಚಂದ್ರಹಾಸ್ ಬಳOಜ ,ಇವರುಗಳಿಗೆ ಗೌರವ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ, ದೈಹಿಕ ಸಂಗ್ರಹಕರು, ಸಾಧನೆ ಗೈದ ಸಿಬ್ಬಂದಿಗಳನ್ನು ಗೌರವಿಸಲಾಯಿತು ವಿವಿಧ ಶಾಖೆಯ ಶಾಖಾಧಿಕಾರಿಗಳು, ಸಿಬ್ಬಂದಿಗಳು, ಸದಸ್ಯರು ಹಾಜರಿದ್ದರು

Exit mobile version