ಮೈರೋಳ್ತಡ್ಕ: ಬಂದಾರು ಗ್ರಾಮದ ಮುಂಡೂರು ಶ್ರೀ ಚಾಮುಂಡೇಶ್ವರಿ ದೇವಸ್ಥಾನ,ಅಮ್ಮನವರಿಗೆ ನೂತನ ಸುತ್ತುಪೌಳಿಯ ಎದುರು ಗೋಪುರ ಸಮರ್ಪಣೆ ಹಾಗೂ ವರ್ಷಾವಧಿ ಮಹೋತ್ಸವದ ಸಂದರ್ಭದಲ್ಲಿ ಧನಸಹಾಯ ಭರವಸೆ ನೀಡಿದ್ದರು. ಕೊಟ್ಟ ಭರವಸೆಯಂತೆ ಶಾಸಕರಾದ ಹರೀಶ್ ಪೂಂಜರವರು ವೈಯುಕ್ತಿಕ ನೆಲೆಯಲ್ಲಿ 1 ಲಕ್ಷ ರೂ ಧನಸಹಾಯ ನೀಡಿರುತ್ತಾರೆ. ಆ ಪ್ರಯುಕ್ತ ಶ್ರೀ ಕ್ಷೇತ್ರದ ಧರ್ಮದರ್ಶಿಗಳಾದ ಆನಂದಗೌಡ ಮುಂಡೂರು ಇವರು ಜು27 ರಂದು ಶಾಸಕರನ್ನು ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಬಂದಾರು ಗ್ರಾ.ಪಂ.ಸದಸ್ಯರಾದ ದಿನೇಶ್ ಗೌಡ ಖಂಡಿಗ ,ಬೆಳ್ತಂಗಡಿ ತಾಲೂಕು ಯುವಮೋರ್ಚಾ ಸದಸ್ಯರಾದ ಗಿರೀಶ್ ಗೌಡ ಬಿ.ಕೆ, ಚಿರಾಮೃತ ಕುಂಬುಡಂಗೆ, ಅಶ್ವತ್ ಗೌಡ ಮುಂಡೂರು ಉಪಸ್ಥಿತರಿದ್ದರು.