ಸ್ಥಳೀಯ ಯೋಜನಾ ಪ್ರದೇಶ ಘೋಷಣೆಯಾದ ಹಲವಾರು ಪ್ರದೇಶಗಳಲ್ಲಿ ಮಹಾಯೋಜನೆಯನ್ನು ತಯಾರಿಸದೆ ಅನಗತ್ಯ ವಿಳಂಬ ಮಾಡುತ್ತಿದ್ದು, ಇದರಿಂದಾಗಿ ಸಾರ್ವಜನಿಕರಿಗೆ ಅನಾನುಕೂಲತೆ ಆಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಈ ಮೂರು ಜಿಲ್ಲೆಗಳಿಗೆ ಮಾತ್ರ ಅನ್ವಯವಾಗುವಂತೆ ಉಲ್ಲೇಖಿತ ಪತ್ರದ ಅಂಶಗಳನ್ನು /ನಿರ್ಭಂಧವನ್ನು ತಾತ್ಕಲಿಕವಾಗಿ ಮೂರು ತಿಂಗಳ ಅವಧಿಯವರೆಗೆ ಅಮಾನತ್ತಿನಲ್ಲಿರಿಸಿದೆ ಎಂದು ಸರಕಾರದ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಪ್ರಕಟನೆ ಮೂಲಕ ತಿಳಿಸಿದ್ದಾರೆ.