ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಸಹ ಪ್ರಾಧ್ಯಾಪಕ ನಿತ್ಯಾನಂದ ಬಾಂದೇಕರರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ.ಟಿ.ಯು.) ಬೆಳಗಾವಿಯು ಪಿ.ಎಚ್.ಡಿ ಪದವಿ ನೀಡಿದೆ.
ಇವರು ಬೆಂಗಳೂರಿನ ಜ್ಯೋತಿ ಫೌಂಡೇಶನ್ನ ಡಾ. ಎಂ.ಜಿ ಅನಂತ ಪ್ರಸಾದ ಮಾರ್ಗದರ್ಶನದಲ್ಲಿ “ಸ್ಟಡಿ ಆಫ್ ಥರ್ಮಲ್ ಆಂಡ್ ಟ್ರೈಬಾಲಾಜಿಕಲ್ ಬಿಹೇವಿಯರ್ ಆಫ್ ಎಎಲ್/ಗಾರ್ನೆಟ್/ಸಿ ಹೈಬ್ರಿಡ್ ಕಾಂಪೊಸಿಟ್ಸ್ ಬೈ ಚಿಲ್ ಕಾಸ್ಟಿಂಗ್ ಮೆಥಡ್” ((Study of thermal and tribological behavior of Al/Garnet/C hybrid composites by chill casting method) ಎಂಬ ವಿಷಯದ ಕುರಿತು ಮಹಾಪ್ರಬಂಧ ಮಂಡಿಸಿದ್ದರು. ಇವರು ಹೊನ್ನಾವರದ ಬಿ. ಯಸ್. ಬಾಂದೇಕರ್ ಮತ್ತು ಯಶೋಧ ದಂಪತಿ ಪುತ್ರ,