ಬೆಳ್ತಂಗಡಿ: ರಾಕ್ಜೆಮ್ ಗುರುವಾಯನಕೆರೆ ವತಿಯಿಂದ ಬೆಳ್ತಂಗಡಿ ತಾಲೂಕಿನಲ್ಲಿ ಪ್ರಥಮ ಬಾರಿಗೆ ದ.ಕ ಜಿಲ್ಲಾ ಮಟ್ಟದ ದೇಹಧಾಡ್ಯ ಸ್ಪರ್ಧೆ ಫೆ.20ರಂದು ಸಂಜೆ 6.೦೦ರಿಂದ ಗುರುವಾಯನಕೆರೆ ಫಣತೀರ್ ಮಾಲ್ನಲ್ಲಿ ನಡೆಯಲಿದೆ ಎಂದು ರಾಕ್ಜೆಮ್ ನ ನಿರ್ದೇಶಕ ನವಾಝ್ ಶರೀಫ್ ಕಟ್ಟೆ ಹೇಳಿದರು. ಅವರು ಫೆ.18ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ತಾಲೂಕಿನಲ್ಲಿಯೇ ಪ್ರಥಮ ಬಾರಿಗೆ ಆಯೋಜಿಸಿರುವ ಈ ಸ್ಪರ್ಧೆಯಲ್ಲಿ ಸುಮಾರು 250 ಬಾಡಿ ಬಿಲ್ಡರ್ಗಳು ಪಾಲ್ಗೊಳ್ಳಲಿದ್ದಾರೆ. 10 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, ವಿಜೇತರಿಗೆ ರೂ.2ಲಕ್ಷ ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಗುವುದು. ಗುರುವಾಯನಕೆರೆ ರಾಕ್ಜೆಮ್ನಲ್ಲಿ ತರಬೇತಿ ಪಡೆದ ೪ ಮಂದಿ ಸ್ಪರ್ಧೆಯಲ್ಲಿ ಭಾಗವಹಿಸುವರು. ಈ ಸ್ಪರ್ಧೆಯನ್ನು ಧರ್ಮಸ್ಥಳದ ಡಿ ಹರ್ಷೇಂದ್ರ ಕುಮಾರ್ ರವರು ಉದ್ಘಾಟಿಸಲಿದ್ದು ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಲಿದ್ದಾರೆ ಹಾಗೂ ಹಲವಾರು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪಾಲುದಾರರಾದ ಮಸೂದ್, ಶಮೀರ್, ಬಾಡಿ ಬಿಲ್ಡರ್ ಗಳಾದ ಸೃಜನ್ ರೈ, ಅನ್ಸಾಫ್, ಬದ್ರುದ್ದೀನ್ ಉಪಸ್ಥಿತರಿದ್ದರು