ವೇಣೂರು: ಇಲ್ಲಿಯ ಮೂಡುಕೋಡಿ ಬೆದ್ರಾರಗುತ್ತು ನಿವಾಸಿ ಸತೀಶ್ ಶೆಟ್ಟಿ(65.ವ) ರವರು ಅಲ್ಪಕಾಲದ ಅಸೌಖ್ಯದಿಂದ ಜ.20 ರಂದು ರಾತ್ರಿ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯಲ್ಲಿ ನಿಧನರಾದರು
ಇವರು ವೇಣೂರು ಗ್ರಾ.ಪಂ. ಮಾಜಿ ಸದಸ್ಯರಾಗಿ, ವೇಣೂರು ರಿಕ್ಷಾ ಚಾಲಕ ಯೂನಿಯನ್ ಗೌರವಾಧ್ಯಕ್ಷರಾಗಿ, ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯರಾಗಿ, ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ, ಎರಡು ಮಕ್ಕಳು ಹಾಗು ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.