ಉಜಿರೆ: ಪ್ರಾಚೀನ ಇತಿಹಾಸಗಳ ಸಂಶೋಧಕ, ಪ್ರಾಚೀನ ವೀರಗಲ್ಲು ಸಂಶೋಧನಾತ್ಮಕ ಕೃತಿಗಳ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹಾಗೂ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಡಾ| ವೈ.ಉಮಾನಾಥ ಶೆಣೈ ಯವರಿಗೆ ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸಮಾಜ ಸೇವಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಯು ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಿಂದ ಕೊಡಲ್ಪಡುವ ಪ್ರಶಸ್ತಿಯಾಗಿದ್ದು, ತಲಾ ರೂ. 1 ಲಕ್ಷ ನಗದು, ಸ್ಮರಣಿಕೆ ಹಾಗೂ ಪ್ರಮಾಣಪತ್ರವನ್ನು ಒಳಗೊಂಡಿದೆ.