ಇಳಂತಿಲ: ಗ್ರಾಮದ ಮೂಲ ಸೌಕರ್ಯಕ್ಕಾಗಿ ಶ್ರಮಿಸಿದ್ದ ಅಲಂಗಡೆ ಸುಬ್ರಾಯ ಭಟ್ ನಿಧನ
ಇಳಂತಿಲ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳಾದ ರಸ್ತೆ, ಸೇತುವೆ, ಶಾಲಾ ನಿರ್ಮಾಣಕ್ಕಾಗಿ ಶ್ರಮಿಸಿದ್ದ ಅಲಂಗಡೆ ಸುಬ್ರಾಯ ಭಟ್ ಡಿ.13 ರಂದು ನಿಧನ ಹೊಂದಿದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಅವರು ಗ್ರಾಮದ ಇಚ್ಚೂರು ಮಹಾತೋಬಾರ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಅಭಿವೃದ್ಧಿಯ ನೇತೃತ್ವ ವಹಿಸಿ ಸುದೀರ್ಘ ಅವಧಿಗೆ ಜೀರ್ಣೋದ್ಧಾರ ಸಮಿತಿ ಅದ್ಯಕ್ಷರಾಗಿ, ಇಳಂತಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ, ಇಳಂತಿಲ ಸರಕಾರಿ ಶಾಲೆಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪತ್ನಿ ಪಾರ್ವತಿ, ಪುತ್ರಿಯರಾದ ಸೀತಾ, ಸುನೀತಾ ಮತ್ತು ಬಂದು ವರ್ಗದವರನ್ನು ಅಗಲಿದ್ದಾರೆ.