ಬೆಳಾಲು: ಇಲ್ಲಿಯ ಅನಂತೋಡಿ ನಿವಾಸಿ ಬೇಬಿಯವರು ಮಾನಸಿಕ ಅಸ್ವಸ್ಥರಾಗಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರಿಗೆ ಚಿಕಿತ್ಸಾ ಸಹಾಯಾರ್ಥ ಬೆಳಾಲಿನ ಶ್ರೀರಾಮ ಶಾಖೆಯ ಸದಸ್ಯರಿಂದ ರೂ.5000/- ಸಹಾಯಧನವನ್ನು ಬೇಬಿಯವರ ಮಕ್ಕಳಾದ ಚರಣ್ ಮತ್ತು ಕಿರಣ್ ರವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬೆಳಾಲು ಶ್ರೀರಾಮ ಶಾಖೆಯ ಕಾರ್ಯದರ್ಶಿ ಲೋಕೇಶ್ ಮಂಡಾಲು, ಉಪಾಧ್ಯಕ್ಷ ಯತೀಶ್ ಕೂಡಂಗೆ, ಜೊತೆ ಕಾರ್ಯದರ್ಶಿ ಲೋಕೇಶ್ ಓಣಾಜೆ, ಸಹ ಸಂಚಾಲಕ ರಮೀತ್, ವಿನಯ್ ಆಲಂಗೂರು, ಹರಿಪ್ರಸಾದ್ ಅರಣೆಮಾರು ಮೊದಲಾದವರು ಉಪಸ್ಥಿತರಿದ್ದರು.