ಗೇರುಕಟ್ಟೆ : ಇಲ್ಲಿಯ ಕಳಿಯ ಗ್ರಾಮದ ಹೀರ್ಯ ಗುತ್ತು ಕುಟುಂಬದ ಸದಸ್ಯರಿಂದ ಸರ್ಪ ಸಂಸ್ಕಾರ,ತಂಬಿಲ ಸೇವೆ, ಆಶ್ಲೇಷ ಪೂಜೆ ಮತ್ತು ಅನ್ನಸಂತರ್ಪಣೆ ಡಿ.6 ರಂದು ನಾಗದೇವರ ಸನ್ನಿಧಿಯಲ್ಲಿ ಜರುಗಿತು.
ಕುಂಠಿನಿ ವೇ.ಮೂ.ರಾಘವೇಂದ್ರ ಬಾಂಗೀಣ್ಣಯ ನೇತೃತ್ವದ -ಪೌರೋಹಿತ್ಯದಲ್ಲಿ , ವಿಧಿ ವಿಧಾನಗಳೊಂದಿಗೆ ನಡೆಯಿತು. ಈ ಸಂದರ್ಭದಲ್ಲಿ ಕುಟುಂಬದ ಹಿರಿಯರಾದ ಸಂಜೀವ ಗೌಡ, ಕೂಸಪ್ಪ ಗೌಡ, ಡಾಕಯ್ಯ ಗೌಡ,ವಾಸಪ್ಪ ಗೌಡ, ಡೊಂಬಯ್ಯ ಗೌಡ,ಕಿಟ್ಟಣ್ಣ ಗೌಡ, ಕುಟುಂಬಸ್ಥರು ಮತ್ತು ಬಂಧು ಬಳಗ ಉಪಸ್ಥಿತರಿದ್ದರು.