ಬೆಳ್ತಂಗಡಿ: ಇಲ್ಲಿಯ ಸಂತೆಕಟ್ಟೆ ನಿವಾಸಿ ವಿಶ್ವನಾಥ ಆರ್ ನಾಯಕ್ ರವರ ಧರ್ಮಪತ್ನಿ, ನ.ಪಂ ಮಾಜಿ ಸದಸ್ಯೆ ಅನುಸೂಯ ವಿ ನಾಯಕ್ ರವರು ಡಿ.2 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಇವರು ಬೆಳ್ತಂಗಡಿ ನ.ಪಂ ಮಾಜಿ ಸದಸ್ಯೆಯಾಗಿದ್ದು, ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕಿಯಾಗಿ, ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯರಾಗಿ, ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿದ್ದರು.
ಮೃತರು ಪತಿ, ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸ್ಥಾಪಕಾಧ್ಯಕ್ಷ ವಿಶ್ವನಾಥ ಆರ್ ನಾಯಕ್, ಓರ್ವ ಪುತ್ರಿ ಅನಿತಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.