ಅಳದಂಗಡಿ: ಕುವೆಟ್ಟು ಗ್ರಾಮ ನಿವಾಸಿ ಸುಜಾತರವರು ಅನಾರೋಗ್ಯದಿಂದ ಬಳಲುತ್ತಿದ್ದು, ಇವರ ವೈದ್ಯಕೀಯ ಚಿಕಿತ್ಸೆಗೆ ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜ ಸೇವಾ ಸಂಘಟನೆಯ ವತಿಯಿಂದ 28ನೇ ಸೇವಾಯೋಜನೆಯಡಿ ರೂ. 10000/- ಚೆಕ್ಕನ್ನು ಸಂಘಟನೆಯ ಗೌರವ ಅಧ್ಯಕ್ಷ ಶಿವಪ್ರಸಾದ್ ಅಜಿಲ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಗೌರವ ಸಲಹೆಗಾರ ರಾಜಶೇಖರ್ ಶೆಟ್ಟಿ , ಯುವವಾಹಿನಿ ಬೆಳ್ತಂಗಡಿ ಅಧ್ಯಕ್ಷ ಯಂ.ಕೆ ಪ್ರಸಾದ್,ರಾಜಶೇಖರ್ ಅಂಡಿಂಜೆ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.