ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್ ನ 6 ಮಂದಿ ಪೌರ ಕಾರ್ಮಿಕರು ಹಾಗೂ ಇಬ್ಬರು ಚಾಲಕರು ಸೇರಿದಂತೆ ಒಟ್ಟು 8 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಎಲ್ಲರೂ ಲಾಯಿಲದಲ್ಲಿರುವ ಕೋವಿಡ್-19 ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಳ್ತಂಗಡಿ ನಗರದಲ್ಲಿ ಪ್ರತಿದಿನ ಬೆಳಗ್ಗೆ ಸ್ವಚ್ಛತಾ ಕಾರ್ಯ ಮತ್ತು ಮನೆ, ಮನೆಗಳಿಂದ ಕಸ ಸಂಗ್ರಹ ಮಾಡಿ ಇದನ್ನು ವಿಲೇವಾರಿ ಮಾಡುವ ಮೂಲಕ ಪೌರಕಾರ್ಮಿಕರು ನಗರದ ಸ್ವಚ್ಚತೆಗೆ ಕಾರಣರಾಗಿದ್ದಾರೆ. ಇದೀಗ ಕೊರೋನಾ ಟೆಸ್ಟ್ನಲ್ಲಿ 6 ಮಂದಿಗೆ ಪಾಸಿಟಿವ್ ಬಂದಿರುವುದರಿಂದ ಕಸ ವಿಲೇವಾರಿ ಒಂದೆರಡು ವಾರಗಳಲ್ಲಿ ವ್ಯತ್ಯಾಯವಾಗಲಿದೆ. ಈ ಬಗ್ಗೆ ನಗರ ಪಂಚಾಯತದ ಎಲ್ಲಾ ಸದಸ್ಯರು ಸಭೆಯನ್ನು ಕರೆದು ಚರ್ಚಿಸಿ, ಸಮಸ್ಯೆ ನಿವಾರಣೆಗೆ ಪ್ರಯತ್ನಿಸಲಾಗುವುದು. ಸಾರ್ವಜನಿಕರು ಸಹಕರಿಸುವಂತೆ ಮುಖ್ಯಾಧಿಕಾರಿ ಸುಧಾಕರ್ ತಿಳಿಸಿದ್ದಾರೆ.