ಬೆಳ್ತಂಗಡಿ: ಪಾರೆಂಕಿ ಗ್ರಾಮದ ಪೆದ್ಯಾರು ಎಂಬಲ್ಲಿ ನಡೆಯುತ್ತಿರುವ ರಸ್ತೆ ಮತ್ತು ಸೇತುವೆ ನಿರ್ಮಾಣ ಕಾಮಗಾರಿಗಳ ಪ್ರಗತಿಯನ್ನು ಶಾಸಕ ಹರೀಶ್ ಪೂಂಜ ಅವರು ಪರಿಶೀಲನೆ ನಡೆಸಿದರು.
ಮಡಂತ್ಯಾರು ಗ್ರಾಮ ಪಂಚಾಯತ್ ನಲ್ಲಿ ನೂತನವಾಗಿ ನಿರ್ಮಿಸುವ ಗಾಂಧಿ ಪುರಸ್ಕಾರ ಸೌಧದ ಶಿಲಾನ್ಯಾಸವನ್ನು ಶಾಸಕ ಹರೀಶ್ ಪೂಂಜ ಈ ವೇಳೆ ನೆರವೇರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯೆ ವಸಂತಿ ಮಚ್ಚಿನ, ಮಡಂತ್ಯಾರು ಗ್ರಾಪಂ ಅಧ್ಯಕ್ಷ ಗೋಪಾಲಕೃಷ್ಣ ಹಾಗೂ ಸದಸ್ಯರು ಇದ್ದರು.